More

    ಜೀವ ಉಳಿಸುವ ವೈದ್ಯರೇ ನಿಜ ದೇವರು; ಹಾಲುಮತ ಮಹಾಸಭಾದ ಅಧ್ಯಕ್ಷ ತ.ರಾ.ವೆಂಕಟೇಶ್ ಅಭಿಮತ

    ಸೂಲಿಬೆಲೆ: ಜೀವನ್ಮರಣ ಹೋರಾಟದ ಸಂದರ್ಭದಲ್ಲಿ ಜೀವ ಉಳಿಸುವ ವೈದ್ಯರಲ್ಲಿ ದೇವರನ್ನು ಕಾಣಬೇಕು ಎಂದು ಹಾಲುಮತ ಮಹಾಸಭಾ ಅಧ್ಯಕ್ಷ ತ.ರಾ.ವೆಂಕಟೇಶ್ ತಿಳಿಸಿದರು.

    ಜಡಿಗೇನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಾಲುಮತ ಮಹಾಸಭಾದಿಂದ ಬುಧವಾರ ಹಮ್ಮಿಕೊಂಡಿದ್ದ ವಿಶ್ವ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿದರು.

    ಸಮಾಜದಲ್ಲಿ ವೈದ್ಯರ ಬಗ್ಗೆ ನಿರ್ಲಕ್ಷ್ಯ ಮನೋಭಾವ ಇದೆ. ಆದ್ದರಿಂದ ವೈದ್ಯರ ಜವಾಬ್ದಾರಿ ಹಾಗೂ ಪ್ರಾಮುಖ್ಯತೆ ಕುರಿತು ಸಮಾಜಕ್ಕೆ ತಿಳಿಸಿಕೊಡುವ ಕೆಲಸ ಆಗಬೇಕು ಎಂದರು.

    ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಜಗದೀಶ್‌ಚಂದ್ರ ಮಾತನಾಡಿ, ಕರೊನಾ ನಡುವೆ ಗ್ರಾಮೀಣ ಭಾಗದಲ್ಲಿನ ಸೇವೆ ಗುರುತಿಸಿ ಸನ್ಮಾನಿಸುತ್ತಿರುವುದು ಸಂತಸದ ಜತೆಗೆ ನಮ್ಮ ಕರ್ತವ್ಯಕ್ಕೆ ಮತ್ತಷ್ಟು ಸ್ಫೂರ್ತಿ ತುಂಬಿದೆ ಎಂದು ತಿಳಿಸಿದರು.

    ನೇತ್ರ ತಜ್ಞ ಡಾ.ರುದ್ರಮೂರ್ತಿ, ಕೆಪಿಸಿಸಿ ಹೊಸಕೋಟೆ ತಾ.ವೀಕ್ಷಕ ಬಿ.ಕೆ.ಅನಿಲ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದಬ್ಬಗುಂಟೆ ಚಂದ್ರು ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts