More

    ತೋಟದಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆ ಕದ್ದವನ ಬಂಧನ

    ಮುಂಡಗೋಡ: ಎರಡು ಅಡಕೆ ತೋಟಗಳಲ್ಲಿ ಸಂಗ್ರಹಿಸಿಟ್ಟಿದ್ದ ಅಡಕೆಯನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಅಡಕೆ ಹಾಗೂ ಸಾಗಾಟಕ್ಕೆ ಬಳಸಿದ್ದ ವಾಹನ ಸಮೇತ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
    ತಾಲೂಕಿನ ಇಂದೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಂದ್ರಾನಗರ ನಿವಾಸಿ ಫಕೀರೇಶ ಮಲ್ಲಪ್ಪ ಹರಿಜನ (30) ಬಂಧಿತ ಆರೋಪಿ.
    ಕಳೆದ ತಿಂಗಳು ಅನಿಲ ಕಾಮತ್ ಹಾಗೂ ನವೀನ ಹುದ್ಲಮನಿ ಎಂಬ ರೈತರು ಅಡಕೆ ತೋಟಗಳಲ್ಲಿನ ಮನೆಗಳಲ್ಲಿ ಅಡಕೆ ಸಂಗ್ರಹಿಸಿಟ್ಟಿದ್ದರು. ಈ ವಿಷಯ ತಿಳಿದ ಕಳ್ಳರು ರಾತ್ರಿ 2.5 ಲಕ್ಷ ರೂ. ಮೌಲ್ಯದ ಅಡಕೆ ಕಳ್ಳತನ ಮಾಡಿದ್ದರು. ಈ ಕುರಿತು ರೈತರು ದೂರು ದಾಖಲಿಸಿದ್ದರು. ಇದೀಗ ಕಳ್ಳತನ ಮಾಡಿದ ಆರೋಪಿಯನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಜತೆಗೆ ಅಡಕೆ ಸಾಗಾಟಕ್ಕೆ ಬಳಸಿದ್ದ ಮಿನಿ ಗೂಡ್ಸ್ ವಾಹನ ಮತ್ತು ಅಡಕೆ ಮಾರಾಟ ಮಾಡಿ ಬಂದ ಹಣದಲ್ಲಿ ಖರೀದಿಸಿದ್ದ ಹೊಸ ಟಾಟಾ ಇಂಟ್ರಾ ಗೂಡ್ಸ ವಾಹನವನ್ನು ಪೊಲೀಸರು ಜಪ್ತಿ ಮಾಡಿಕೊಂಡಿದ್ದಾರೆ.
    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪನ್ನೇಕರ, ಹೆಚ್ಚುವರಿ ವರಿಷ್ಠಾಧಿಕಾರಿ ಎಸ್. ಬದರಿನಾಥ, ಡಿವೈಎಸ್ನ ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್​ಐ ಬಸವರಾಜ ಮಬನೂರ, ಎನ್.ಡಿ. ಜಕ್ಕಣ್ಣವರ,ಸಿಬ್ಬಂದಿ ಮಣಿಮಾಲಿನ್ ಮೇಸ್ತ್ರಿ, ಮಹ್ಮದಸಲಿಂ, ಗಣಪತಿ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವ, ಶರತ್ ದೇವಳಕ್ಕಿ, ತಿರುಪತಿ ಚೌಡಣ್ಣವರ, ಅರುಣ ಬಾಗೇವಾಡಿ, ಮಹಾಂತೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts