More

    ಭಾರತದ ‘ಶೌರ್ಯ’ ಪ್ರದರ್ಶನ: ಎಲ್ಲಿ, ಏಕೆ?

    ನವದೆಹಲಿ: ಭಾರತ ಈಗ ಮತ್ತೊಮ್ಮೆ “ಶೌರ್ಯ” ಪ್ರದರ್ಶನ ನಡೆಸಿದೆ. ಹಾಗಂತ ಗಡಿಯಲ್ಲೆಲ್ಲೂ ಗುಂಡಿನ ಚಕಮಕಿ, ಯುದ್ಧ ಮುಂತಾದ್ದೇನೂ ಸಂಭವಿಸಿಲ್ಲ. ಹಾಗಾದರೆ ಆಗಿದ್ದೇನು ಎಂಬುದಕ್ಕೆ ಒಡಿಶಾದಲ್ಲಿದೆ ಉತ್ತರ.

    ಭಾರತದ ಶೌರ್ಯ ಕ್ಷಿಪಣಿಯ ಹೊಸ ಆವೃತ್ತಿಯ ಪ್ರಾಯೋಗಿಕ ಪರೀಕ್ಷೆ ಶನಿವಾರ ಒಡಿಶಾದಲ್ಲಿ ನಡೆದಿದೆ. ಒಡಿಶಾ ಕರಾವಳಿ ತೀರದಲ್ಲಿ ತನ್ನ ಸಾಮರ್ಥ್ಯದ ಝಲಕ್ ತೋರಿರುವ ಶೌರ್ಯ ಕ್ಷಿಪಣಿ, 800 ಕಿ.ಮೀ. ದೂರದವರೆಗೂ ಗುರಿ ಇಡಬಲ್ಲದು.

    ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮನಿರ್ಭರ ಭಾರತವನ್ನು ಘೋಷಿಸಿದ ಬಳಿಕ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತನ್ನ ಸಾಮರ್ಥ್ಯ ಹೆಚ್ಚಿಸಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಿದೆ. ಮತ್ತೊಂದೆಡೆ 400 ಕಿ.ಮೀ. ದೂರದವರೆಗೂ ಗುರಿ ಇಟ್ಟು ಹೊಡೆಯಬಲ್ಲ ಬ್ರಹ್ಮೋಸ್​ ಸೂಪರ್​ಸಾನಿಕ್​ ಯುದ್ಧನೌಕೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts