More

    ಬಂದ್‌ಗೆ ಬೆಂಬಲ ಇಲ್ಲ

    ತಾಳಿಕೋಟೆ: ಮರಾಠ ಅಭಿವೃದ್ಧಿ ಪ್ರಾಧಿಕಾರದ ವಿಷಯವಾಗಿ ಕೆಲವು ಕನ್ನಡಪರ ಸಂಘಟನೆಗಳು ಕರೆ ನೀಡಿರುವ ಬಂದ್‌ಗೆ ನಮ್ಮ ಯುವಜನ ಸೇನೆ ಸಂಘಟನೆ ಬೆಂಬಲ ಸೂಚಿಸುವುದಿಲ್ಲ. ಮರಾಠ ಪ್ರಾಧಿಕಾರ ರಚಿಸಿದ್ದಕ್ಕೆ ಹೃದಯ ಪೂರ್ವಕವಾಗಿ ಸ್ವಾಗತಿಸುತ್ತೇವೆಂದು ಯುವಜನ ಸೇನೆ ತಾಲೂಕು ಅಧ್ಯಕ್ಷ ಲಿಂಗರಾಜ ಮೇಟಿ ಹೇಳಿದರು.
    ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರು ಹೇಳಿದಂತೆ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ. ಈ ನಾಡಿನಲ್ಲಿ ಶತಶತಮಾನಗಳಿಂದಲೂ ನೂರಾರು ಜಾತಿಯ ಜನರು ಇಲ್ಲಿ ನೆಲೆನಿಂತು ಸಹಬಾಳ್ವೆ ನಡೆಸುತ್ತಿದ್ದಾರೆ. ಅದರಂತೆ ಮರಾಠ ಸಮುದಾಯದ ಜನರೂ ಹತ್ತಾರು ತಲೆಮಾರುಗಳಿಂದ ಇಲ್ಲಿಯೇ ವಾಸಿಸುತ್ತಿದ್ದು, ಕನ್ನಡ ಭಾಷಿಕರಾಗಿ ಮರಾಠ ಸಂಸ್ಕೃತಿಯೊಂದಿಗೆ ಬದುಕುತ್ತಿದ್ದಾರೆ. ಛತ್ರಪತಿ ಶಿವಾಜಿ ಮಹಾರಾಜರ ಕಾಲದಿಂದಲೂ ಮರಾಠ ಜಾತಿ ಜನರು ಕರ್ನಾಟಕದ ಮೂಲೆ-ಮೂಲೆಯಲ್ಲಿ ನಿಂತು ಅಪ್ಪಟ ಕನ್ನಡಿಗರಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಮರಾಠ ಅಭಿವೃದ್ಧಿ ನಿಗಮ ರಚಿಸಿ 50 ಕೋಟಿ ರೂ. ಮೀಸಲಿಟ್ಟಿರುವುದನ್ನು ಯುವ ಜನಸೇನೆ ಸಂಘಟನೆ ಸ್ವಾಗತಿಸುತ್ತದೆ ಎಂದರು.
    ವಿಶ್ವನಾಥ ಬಿದರಕುಂದಿ, ಸಂಗನಗೌಡ ಕುಳಗೇರಿ, ಬಾಗಣ್ಣ ಬರದೇನಾಳ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts