ಬನ್ನೂರು: ಸಮೀಪದ ಯಾಚೇನಹಳ್ಳಿ ಗ್ರಾಮದಲ್ಲಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ, ಲಯನ್ಸ್ ಸಂಸ್ಥೆ, ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ವತಿಯಿಂದ ಶನಿವಾರ ಕಣ್ಣಿನ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ನಂಜಮ್ಮ ಮೋಟೆಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಜೆ. ಹನುಮಂತೇಗೌಡ ಮಾತನಾಡಿ, ಕಣ್ಣಿನ ಬಗ್ಗೆ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಕಣ್ಣು ಮಾನವನ ಸೂಕ್ಷ್ಮಅಂಗವಾಗಿದ್ದು, ಪ್ರತಿಯೊಬ್ಬರೂ ನಿಗದಿತ ಸಮಯದಲ್ಲಿ ಕಣ್ಣಿನ ತಪಾಸಣೆಗೆ ಒಳಗಾಗಬೇಕು ಎಂದು ಹೇಳಿದರು. ಪ್ರತಿಯೊಬ್ಬರೂ ಸಾವಿನ ನಂತರ ಕಣ್ಣಿನ ದಾನ ಮಾಡಬೇಕು ಎಂದು ಹೇಳಿದರು.
ವಾತ್ಸಲ್ಯ ಸಂಸ್ಥೆಯ ಶಿಕ್ಷಕ ಅನಿಲ್ಬಾಬು, ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಶಿಬಿರದ ಮುಖ್ಯಸ್ಥೆ ಭಾಗ್ಯಾ, ವೆಂಕಟೇಶ್, ಡಾ.ಬಾಲಗಂಗಾಧರ್ ಇತರರು ಇದ್ದರು.