More

    ವಿವೇಕಾನಂದರ ಆಶಯದಂತೆ ಯುವ ಪೀಳಿಗೆ ಶ್ರಮಿಸಬೇಕು: ಮಂಜುನಾಥಸ್ವಾಮಿ

    ಮೈಸೂರು: ಯುವಕರು ನಿಸ್ವಾರ್ಥ ಸೇವೆಯಿಂದ ದೇಶವನ್ನು ಕಟ್ಟುವಂತಹ ಪ್ರತಿಜ್ಞೆ ಮಾಡಬೇಕು ಎಂಬುದು ಸ್ವಾಮಿ ವಿವೇಕಾಂದರ ಅಪೇಕ್ಷೆಯಾಗಿತ್ತು. ಅವರ ಆಶಯದಂತೆ ಇವತ್ತಿನ ಯುವ ಪೀಳಿಗೆ ಶ್ರಮಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಬಿ.ಎಸ್.ಮಂಜುನಾಥಸ್ವಾಮಿ ಅವರು ಹೇಳಿದರು.


    ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಹಿಂದೂಸ್ಥಾನ್ ಕಾಲೇಜು-ರಾಷ್ಟ್ರೀಯ ಸೇವಾ ಯೋಜನೆಯ ಸಂಯುಕ್ತಾಶ್ರಯದಲ್ಲಿ ಬುಧವಾರ ಹಿಂದುಸ್ತಾನ್ ಕಾಲೇಜಿನಲ್ಲಿ ನಡೆದ ಸ್ವಾಮಿ ವಿವೇಕಾನಂದರ ಜನ್ಮದಿನೋತ್ಸವ ಹಾಗೂ ರಾಷ್ಟ್ರೀಯ ಯುವ ಸ್ತಪಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು

    .
    ಇತ್ತೀಚಿನ ವಿದ್ಯಾರ್ಥಿಗಳು ಸ್ವಾತಂತ್ರೃ ಎಂಬ ಪದವನ್ನು ಕೇಳಿರುತ್ತಾರೆ. ಆದರೆ ಆ ಸ್ವಾತಂತ್ರೃ ಹೇಗೆ ಬಂತು, ಯಾರೆಲ್ಲ ಸ್ವಾತಂತ್ರೃ ಹೋರಾಟದಲ್ಲಿ ಹೋರಾಡಿದರು ಎಂಬ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವಲ್ಲಿ ಹಿಂದೆ ಇದ್ದಾರೆ ಎಂದರು.


    ಸ್ವಾಮಿ ವಿವೇಕಾನಂದರು ದೇಶಕ್ಕೆ ಮಹತ್ತರದ ಸ್ಥಾನ ತಂದುಕೊಡುವಲ್ಲಿ ಅವರ ಶಕ್ತಿ, ಅವರ ಕರ್ತವ್ಯ ಹಾಗೂ ಪರಿಶ್ರಮ ಕಾರಣವಾಗಿದೆ. ಸ್ವಾಮಿ ವಿವೇಕಾನಂದರಿಗೂ ಮೈಸೂರಿಗೂ ಸಂಬಅಧ ಇದೆ. ವಿವೇಕಾನಂದರು ಅಮೇರಿಕಾಗೆ ತೆರಳಲು ಧನ ಸಹಾಯ ಮಾಡಿದ್ದೆ ಮೈಸೂರಿನ ಅರಸರು. ಹಿಂದೂ ಧರ್ಮ ಪುನರುತ್ಥಾನ ಮಾಡಲು ಅನೇಕ ಹಿರಿಯರು ಕಾರ್ಯನಿರ್ವಹಿಸುತ್ತಾರೆ. ಆದರೆ ವಿವೇಕಾನಂದರು ಅತೀ ಕಿರಿಯ ವಯಸ್ಸಿನಲ್ಲೇ ದೇಶದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಹ ಧರ್ಮದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ ಎಂದು ಹೇಳಿದರು.


    ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಕೆ.ಸುರೇಶ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯವನ್ನು ಕಾಡುತ್ತಿರುವ ಅನೇಕ ಸಮಸ್ಯೆಗಳಿಗೆ ವಿವೇಕಾನಂದರ ವಿಚಾರ, ತತ್ವಾದರ್ಶ ಪಾಲಿಸುವುದರಲ್ಲಿ ಪರಿಹಾರ ಇದೆ. ಅರ್ಥ ತಿಳಿದುಕೊಂಡು ಮಹನೀಯರ ದಿನವನ್ನು ಆಚರಿಸಿದರೆ ಅದರ ಪರಿಣಾಮವೇ ಬೇರೆಯಾಗುತ್ತದೆ ಎಂದರು.
    ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ಪ್ರೇಮ್‌ಕುಮಾರ್, ಪ್ರಾಂಶುಪಾಲರಾದ ಡಾ.ಸಿ.ಜೆ.ಪ್ರಿಯಾ ಸೇರಿದಂತೆ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts