ಬೆಂಗಳೂರು: ‘ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಖಾತೆ ಬೇಕು. ಮಿಲಿಯನ್ಗಟ್ಟಲೆ ಹಿಂಬಾಲಕರು ಬೇಕು. ಆದರೆ, ನೆಗೆಟಿವಿಟ್ ಮಾತ್ರ ಬೇಡ ಎಂದರೆ ಹೇಗೆ? ಬೇರೆ ದಾರಿ ಇಲ್ಲ. ನೆಗೆಟಿವಿಟಿ ಬಂದಾಗ ಸ್ವೀಕರಿಸಬೇಕು ಅಷ್ಟೇ …’
ಇದನ್ನೂ ಓದಿ: ಕ್ಯಾಮೆರಾ, ಕನಸು … ‘ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ ಟ್ರೈಲರ್ ಬಿಡುಗಡೆ
ಹಾಗಂತ ಹೇಳಿದ್ದು ಸುದೀಪ್. ಅದಕ್ಕೆ ಕಾರಣವೂ ಇದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸುದೀಪ್ ಅವರನ್ನು ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚುತ್ತಿರುವ ನೆಗೆಟಿವಿಟಿ ಬಗ್ಗೆ ಕೇಳಲಾಯಿತು. ರಶ್ಮಿಕಾ ಮಂದಣ್ಣ ಸೇರಿದಂತೆ ಹಲವು ಸೆಲೆಬ್ರಿಟಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಬೆಳಕು ಬೆಳಕು ಚೆಲ್ಲಲಾಯಿತು. ಈ ಬಗ್ಗೆ ಮಾತನಾಡಿದ ಸುದೀಪ್, ಅದನ್ನೆಲ್ಲ ಸ್ವೀಕರಿಸುವ ಮನಸ್ಥಿತಿ ಬೆಳೆಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ‘ನಾವು ಜಗತ್ತನ್ನು ಬದಲಾಯಿಸುವುದಕ್ಕೆ ಸಾಧ್ಯವಿಲ್ಲ. ಅದರ ಬದಲು ಪರಿಸ್ಥಿತಿಯನ್ನು ನಿಭಾಯಿಸುವುದನ್ನು ಕಲಿಯಬೇಕು. ಒಮ್ಮೆ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡರೆ ಮುಗಿಯಿತು. ಬರೀ ಸನ್ಮಾನಗಳಷ್ಟೇ ಅಲ್ಲ, ಟೀಕೆಗಳು ಸಹ ಎದುರಾಗುತ್ತವೆ. ಅದನ್ನು ಯಾವ ರೀತಿ ಫೇಸ್ ಮಾಡಬೇಕು ಎಂಬುದನ್ನು ಕಲಿಯುವುದರ ಜತೆಗೆ ಗಟ್ಟಿಯಾಗುತ್ತಾ ಹೋಗಬೇಕು. ಮುಂದೇನಾಗಬಹುದು ಎಂದು ಗೊತ್ತಾದಾಕ್ಷಣ ಅಲರ್ಟ್ ಆಗಬೇಕು. ಏನು ಮಾತಾಡಬೇಕು, ಹೇಗೆ ಮಾತಾಡಬೇಕು ಎಂಬುದನ್ನು ಕಲಿಯಬೇಕು’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಹೊಸ ವರ್ಷದ ಮೊದಲ ಶುಕ್ರವಾರ ಎಂಟು ಚಿತ್ರಗಳ ಬಿಡುಗಡೆ …
‘ಎಲ್ಲರಿಗೂ ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಖಾತೆ ತೆಗೆಯಬೇಕು ಎಂಬ ಆಸೆ ಇರುತ್ತದೆ. ಮಿಲಿಯನ್ಗಟ್ಟಲೆ ಫಾಲೋವರ್ಸ್ ಬೇಕು ಎಂಬ ಆಸೆ ಇರುತ್ತದೆ. ಆದರೆ, ನೆಗೆಟಿವಿಟಿ ಬೇಡ ಎಂದರೆ ಹೇಗೆ? ನೆಗೆಟಿವಿಟಿ ಬಂದಾಗ ಸ್ವೀಕರಿಸ್ಬೇಕು ಅಷ್ಟೇ. ಎಲ್ಲರಗೂ ಅವರದ್ದೇ ಆದ ಒಂದು ಅಭಿಪ್ರಾಯ ಇರುತ್ತದೆ. ಅದು ತಪ್ಪು ಎನ್ನಲಾಗುವುದಿಲ್ಲ’ ಎಂದು ಸುದೀಪ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ರಶ್ಮಿಕಾಗೆ ಇನ್ನಷ್ಟು ಗಟ್ಟಿಯಾಗಬೇಕು ಎಂದು ಪರೋಕ್ಷವಾಗಿ ಹೇಳಿದ್ದಾರೆ.
‘ಪಠಾಣ್’ ಮುಂದಕ್ಕೆ ಹೋಗಿಲ್ಲ … 10ಕ್ಕೆ ಬಿಡುಗಡೆಯಾಗಲಿದೆಯಂತೆ ಟ್ರೈಲರ್