More

    ಅಧಿಕಾರ ಸ್ವೀಕರಿಸಲು ಪರದಾಟ

    ಬೈಲಹೊಂಗಲ: ಪಟ್ಟಣದ ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಲ್ಯಾಣಾಕಾರಿಯಾಗಿ ಅಧಿಕಾರ ಸ್ವೀಕರಿಸಲು ಬಂದ ಶಾಂತವ್ವ ಮರಿಗೌಡರ ಗುರುವಾರ ಕಚೇರಿ ಒಳಾಂಗದಲ್ಲೇ ದಿನ ಕಳೆದ ಪ್ರಸಂಗ ನಡೆದಿದೆ. ಕರ್ನಾಟಕ ಆಡಳಿತ ನ್ಯಾಯ ಮಂಡಳಿ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಆದೇಶ ನೀಡಿದ್ದರಿಂದ ಕಚೇರಿಗೆ ಬಂದಾಗ ಕರ್ತವ್ಯದಲ್ಲಿದ್ದ ಅಕಾರಿ ಮಂಜುನಾಥ ಕರಿಸಿರಿ ಹಾಜರಿ ರಿಜಿಸ್ಟರ್ ಬುಕ್ ಅನ್ನು ತಮ್ಮ ಕೊಠಡಿಯಲ್ಲಿಟ್ಟು ಬೀಗ ಹಾಕಿಕೊಂಡು ಹೋಗಿದ್ದರಿಂದ ಅಕಾರ ವಹಿಸಿಕೊಳ್ಳದೆ ಒಳಾಂಗದಲ್ಲೇ ಕಾಲ ಕಳೆದರು. ವರ್ಗಾವಣೆ ಆದೇಶ ಗೊತ್ತಿದ್ದರೂ ಕರಿಸಿರಿ ಅವರು ಕೊಠಡಿಗೆ ಬೀಗ ಜಡಿದಿದ್ದಾರೆ. ವಿಚಾರಿಸಿದರೆ ನಾನು ಬೆಂಗಳೂರಲ್ಲಿದ್ದೇನೆ. ಸಹಿ ಬೇಕಾದರೆ ನಾಳೆ ಬಂದು ಮಾಡಿ ಎಂದು ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಮೇಲಕಾರಿಗಳನ್ನು ಕೇಳಿದರೆ ನಿಮ್ಮ ವರ್ಗಾವಣೆ ಕುರಿತು ನಮ್ಮ ಗಮನಕ್ಕೆ ತರಬೇಕೆಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದು ಶಾಂತವ್ವ ಆರೋಪಿಸಿದರು.
    ದ್ವಿತೀಯ ದರ್ಜೆ ಸಹಾಯಕಿ ಕಮಲವ್ವಾ ಹಿರೇಮಠ ಅವರನ್ನು ವಿಚಾರಿಸಿದಾಗ, ರಿಜಿಸ್ಟರ್ ಬುಕ್ ಅನ್ನು ಕೊಠಡಿಯಲ್ಲಿಟ್ಟು ಬೀಗ ಹಾಕಿದ್ದರಿಂದ ನಾವ್ಯಾರೂ ಸಹಿ ಮಾಡಿಲ್ಲ. ಕಂಪ್ಯೂಟರ್‌ನಲ್ಲಿ ಹೆಬ್ಬೆಟ್ಟು ಮಾತ್ರ ನೀಡಿದ್ದೇವೆ ಎಂದು ತಿಳಿಸಿದ್ದಾರೆ.
    ಈ ಕುರಿತು ನಿಯೋಜಿತ ಅಕಾರಿ ಮಂಜುನಾಥ ಕರಿಸಿರಿ ಅವರನ್ನು ಸಂಪರ್ಕಿಸಿದಾಗ ಕುಟುಂಬ ಸದಸ್ಯರೊಬ್ಬರಿಗೆ ಆರೋಗ್ಯ ಸಮಸ್ಯೆ ಎದುರಾಗಿತ್ತು. ಅದರಿಂದ ಕಚೇರಿಯಲ್ಲಿ ಇಲ್ಲ. ರಿಜಿಸ್ಟರ್ ಬುಕ್ ಕಚೇರಿಯಲ್ಲಿಯೇ ಇದೆ. ನಾಳೆಯೇ ಬಂದು ಅಕಾರ ಹಸ್ತಾಂತರಿಸುವೆ. ಇದೇನು ದೊಡ್ಡ ವಿಷಯವಲ್ಲ ಎಂದಿದ್ದಾರೆ.

    ಅಧಿಕಾರ ಸ್ವೀಕರಿಸಲು ಪರದಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts