ಹುಬ್ಬಳ್ಳಿ : ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕಾಂಗ್ರೆಸ್ ತೊರೆದು, ಬಿಜೆಪಿ ಸೇರ್ಪಡೆಗೊಂಡಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಇಲ್ಲಿನ್ನ ಚನ್ನಮ್ಮ ವೃತ್ತದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಶೆಟ್ಟರ್ ಪ್ರತಿಕೃತಿ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿದರು. ಕಾಂಗ್ರೆಸ್ನಲ್ಲಿ ಎಲ್ಲ ರೀತಿಯ ಸ್ಥಾನ, ಮಾನ ಕೊಟ್ಟರೂ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ದೂರಿದರು.
ಜಗದೀಶ ಶೆಟ್ಟರ್ ಮರಳಿ ಬಿಜೆಪಿಗೆ ತೆರಳುವ ಮೂಲಕ ಕಾಂಗ್ರೆಸ್ ಮಲೀನವಾಗುವುದನ್ನು ತಪ್ಪಿಸಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಇದೇ ಸಂದರ್ಭದಲ್ಲಿ ಸಿಹಿಯನ್ನೂ ಹಂಚಿದರು.
ಕಾಂಗ್ರೆಸ್ನಲ್ಲಿ ನಂಬಿಕೆ ದ್ರೋಹ ಮಾಡುವವರು ಇಲ್ಲ. ಶೆಟ್ಟರ್ ಒಂದು ವರ್ಷದಲ್ಲಿಯೇ ಕಾಂಗ್ರೆಸ್ನಿಂದ ಹೊರಗೆ ಹೋಗಿದ್ದು ಒಳ್ಳೆಯದಾಯಿತು ಎಂದು ಪ್ರತಿಭಟನಾಕಾರರು ಇದೇ ಸಂದರ್ಭದಲ್ಲಿ ಹೇಳಿದರು.
ಕಾಂಗ್ರೆಸ್ನ ತಾಜ ಮುಜಾಹಿದ, ಕಿರಣ ಗಾಣದಾಳ, ಸಾದಿಕ್ ಯಕ್ಕುಂಡಿ, ಫಿರಾಜಿ ಖಂಡೇಕಾರ, ಬಾಳಮ್ಮ ಜಂಗನವರ, ಕಲಾವತಿ ದತ್ತವಾಡ, ಕಾಶಿಂ ಕೂಡಲಗಿ ಹಾಗೂ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.