More

    ಆರೋಗ್ಯ ಕೇಂದ್ರ ಸ್ಥಳಾಂತರಿಸದಂತೆ ಶಾಸಕ ಟೆಂಗಿನಕಾಯಿ ಸೂಚನೆ

    ಹುಬ್ಬಳ್ಳಿ : ಇಲ್ಲಿನ ಶಿರಡಿ ನಗರದ ಆರೋಗ್ಯ ಕೇಂದ್ರವನ್ನು ಬೇರೆಡೆ ಸ್ಥಳಾಂತರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿ, ಸ್ಥಳೀಯ ನಾಗರಿಕರು ಬುಧವಾರ ಪ್ರತಿಭಟನೆ ನಡೆಸಿದರು.

    ಪ್ರತಿಭಟನೆಯ ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಶಾಸಕ ಮಹೇಶ ಟೆಂಗಿನಕಾಯಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಅವರೊಂದಿಗೆ ಮೋಬೈಲ್ ಫೋನ್ ಮೂಲಕ ಮಾತನಾಡಿ ಯಾವುದೇ ಕಾರಣಕ್ಕೂ ಆರೋಗ್ಯ ಕೇಂದ್ರ ಸ್ಥಳಾಂತರಿಸದಂತೆ ಸೂಚಿಸಿದರು.

    ಸುತ್ತಲಿನ ಐದು ವಾರ್ಡ್​ಗಳಲ್ಲಿನ ಜನರು ಇದೇ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. 18 ಕೊಳಚೆ ಪ್ರದೇಶಗಳು ಈ ವಾರ್ಡ್​ಗಳಲ್ಲಿವೆ. ಹೀಗಾಗಿ, ಇನ್ನೂ ಎರಡು ಆರೋಗ್ಯ ಕೇಂದ್ರಗಳನ್ನು ಇಲ್ಲಿ ಆರಂಭಿಸಬೇಕು ಎಂದು ಶಾಸಕ ಟೆಂಗಿನಕಾಯಿ ಅವರು ಜಿಲ್ಲಾ ಆರೋಗ್ಯಾಧಿಕಾರಿ ಅವರಿಗೆ ಸಲಹೆ ನೀಡಿದರು.

    ಕೋವಿಡ್ ಅವಧಿಯಲ್ಲಿ ಈ ಆರೋಗ್ಯ ಕೇಂದ್ರದಲ್ಲಿ ಸುತ್ತಲಿನ ಬಡಾವಣೆ ಜನರು ಲಸಿಕೆ ಪಡೆದುಕೊಂಡಿದ್ದಾರೆ. ಬಡಾವಣೆ ಜನರು ಅನರೋಗ್ಯಕ್ಕೆ ತುತ್ತಾದಾಗ ಇದೇ ಆರೋಗ್ಯ ಕೇಂದ್ರ ಅವಲಂಬಿಸಿದ್ದಾರೆ. ಯಾವುದೇ ಕಾರಣಕ್ಕೂ ಕೇಂದ್ರ ಸ್ಥಳಾಂತರಿಸದಂತೆ ಸ್ಥಳೀಯರು ಮನವಿ ಮಾಡಿದರು.

    ಪಾಲಿಕೆ ಸದಸ್ಯರಾದ ಸೀಮಾ ಮೊಗಲಿಶೆಟ್ಟರ, ಸಂತೋಷ ಚವ್ಹಾಣ, ರೂಪಾ ಶೆಟ್ಟಿ, ಶಿವು ರಾಯನಗೌಡ್ರ, ಆಯುಕ್ತ ಈಶ್ವರ ಉಳ್ಳಾಗಡ್ಡಿ, ಆರೋಗ್ಯ ಕೇಂದ್ರದ ವೈದ್ಯ ಡಾ. ರವಿ ನಾಯಕ, ಸಾಮಾಜಿಕ ಕಾರ್ಯಕರ್ತ ಸಿದ್ದು ಮೊಗಲಿಶೆಟ್ಟರ, ಶಾಕೀರ ಸನದಿ, ಮಂಜುನಾಥ ಕೊಂಡಪಲ್ಲಿ ಹಾಗೂ ಇತರರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts