ಮಂಡ್ಯ: ಬೀದಿ ನಾಟಕದ ಕಲಾವಿದರು ಪ್ರೇಕ್ಷಕರ ಕಣ್ಣೆದುರೇ ರಂಗಕಿರಣ, ರಂಗಪ್ರಸ್ತುತಿ ಪ್ರದರ್ಶಿಸುವುದು ಸುಲಭವಲ್ಲ ಎಂದು ಖ್ಯಾತ ರಂಗಕರ್ಮಿ ಎಚ್.ಜನಾರ್ಧನ್(ಜನ್ನಿ) ಹೇಳಿದರು.
ನಗರದ ಬಾಲಭವನದಲ್ಲಿ ರಾಜ್ಯ ಬೀದಿ ನಾಟಕ ಕಲಾ ತಂಡಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ರಾಜ್ಯಮಟ್ಟದ ಬೀದಿ ನಾಟಕೋತ್ಸವ ಹಾಗೂ ಬೀದಿ ನಾಟಕ ಕಲಾವಿದರ ಪ್ರಸ್ತುತ ದಿನಗಳ ಸವಾಲುಗಳು ಕುರಿರು ವಿಚಾರ ಸಂಕಿರಣದಲ್ಲಿ ಉಪನ್ಯಾಸ ನೀಡಿದರು. ರಂಗಭೂಮಿಯಲ್ಲಿ ಎಲ್ಲ ವ್ಯವಸ್ಥೆಗಳಿರುತ್ತವೆ. ಆದರೆ, ಬೀದಿ ನಾಟಕ ಸತ್ಯವನ್ನು ಪ್ರತಿಪಾದಿಸುತ್ತದೆ. ನಿರಂತರವಾದ ಅಧ್ಯಯನ, ಅಭ್ಯಾಸ ಹಾಗೂ ಕಲಿಕೆಯಲ್ಲಿ ಪೂರ್ಣನಾದಾಗ ನೈಜ ಕಲಾವಿದನಾಗಿ ಹೊರಹೊಮ್ಮುತ್ತಾನೆ ಎಂದರು.
ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ವೈರಮುಡಿ, ಅಧ್ಯಕ್ಷ ಗ್ಯಾರಂಟಿ ರಾಮಣ್ಣ ವಹಿಸಿದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಡಾ.ವೇಣುಗೋಪಾಲ್, ಜಿಲ್ಲಾ ವಾರ್ತಾಧಿಕಾರಿ ನಿರ್ಮಲಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸಿ.ಮಂಜುನಾಥ, ಕೃಷಿಕ ಲಯನ್ಸ್ ಸಂಸ್ಥೆ ಆಡಳಿತಾಧಿಕಾರಿ ಕೆ.ಟಿ.ಹನುಮಂತು, ಮಂಗಲ ಯೋಗೇಶ್, ಕೀಲಾರ ಕೃಷ್ಣೇಗೌಡ, ಸಂತೆಕಸಲಗೆರೆ ಬಸವರಾಜ್, ಟಿ.ಎಂ.ನಾಗರಾಜು ಇತರರಿದ್ದರು.