ರಾಯಚೂರು: ನಗರದ ಹಜರತ್ ಸೈಯದ್ ಷಾ ಕರಿಮುಲ್ಲಾ ಖಾದ್ರಿ ಶಹೀದ್ ದರ್ಗಾಗೆ ಸೇರಿದ ಭೂಮಿಯನ್ನು ಒತ್ತುವರಿ ಮಾಡುತ್ತಿರುವುದನ್ನು ತಡೆಬೇಕು ಎಂದು ಒತ್ತಾಯಿಸಿ ಸ್ಥಳೀಯ ಜಿಲ್ಲಾಕಾರಿ ಕಚೇರಿ ಮುಂದೆ ಎಸ್ಡಿಪಿಐನಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಕಾರಿ ಕಚೇರಿ ಕೇಂದ್ರ ಸ್ಥಾನಿಕ ಅಕಾರಿ ಪ್ರಶಾಂತಕುಮಾರಗೆ ಮನವಿ ಸಲ್ಲಿಸಿ, ದರ್ಗಾ ಭೂಮಿ ಒತ್ತುವರಿಗೆ ಸಂಬಂಸಿದಂತೆ ಸಂಬಂಧಪಟ್ಟ ಇಲಾಖೆ ಅಕಾರಿಗಳಿಗೆ ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿದರು.
ನಿಯಮ ಬಾಹಿರವಾಗಿ ಭೂಮಿಯನ್ನು ಒತ್ತುವರಿ ಮಾಡಲು ಎನ್ಎ ಮಾಡಿಕೊಡಲು ನಗರಾಭಿವೃದ್ಧಿ ಪ್ರಾಕಾರಕ್ಕೆ ಅರ್ಜಿ ಸಲ್ಲಿಸಲಾಗಿದೆ. ದರ್ಗಾಗೆ ಸೇರಿದ ಭೂಮಿಯನ್ನು ವಕ್ ಮಂಡಳಿಯಲ್ಲಿ ನೋಂದಣಿ ಮಾಡಿ ಮಂಡಳಿಗೆ ನೀಡಲಾಗಿದೆ. ಅಕಾರಿಗಳು ಒತ್ತುವರಿಗೆ ಅವಕಾಶ ನೀಡಬಾರದು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಪ್ರತಿಭಟನೆಯಲ್ಲಿ ಸಂಘಟನೆ ಜಿಲ್ಲಾಧ್ಯಕ್ಷ ಜಿಲಾನಿ ಪಾಷಾ, ಪದಾಕಾರಿಗಳಾದ ಮತೀನ್ ಅನ್ಸಾರಿ, ಮಹ್ಮದ್ ಗೌಸ್, ಸೈಯದ್ ಮುರ್ಶಿದ್ ಜಾನಿ, ಮಹ್ಮದ್ ಸಾಹೇಬ್, ಶಫಿ, ತೌಸ್ೀ ಅಹ್ಮದ್, ಅನ್ಸರ್ ಪಾಷಾ, ಅಲಂ ಬಾಷಾ ಪಾಲ್ಗೊಂಡಿದ್ದರು.