More

    ಬಿಎಸ್​ವೈ ಮಂಡಿಸಿದ ಬಜೆಟ್​ನಲ್ಲಿ ಮಿರ್ಚಿ ಮಂಡಕ್ಕಿ ಖಾರಾನೂ ಇಲ್ಲ, ಶಕ್ತಿನೂ ಇಲ್ಲ, ಹಣನೂ ಇಲ್ಲ: ಡಿಕೆಶಿ ವ್ಯಂಗ್ಯ

    ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್​.ಯಡಿಯೂರಪ್ಪ ಅವರು ಮಂಡಿಸಿದ ಬಜೆಟ್​ನಲ್ಲಿ ಮಿರ್ಚಿ ಮಂಡಕ್ಕಿ ಖಾರಾನೂ ಇಲ್ಲ, ಶಕ್ತಿನೂ ಇಲ್ಲ ಹಾಗೂ ಹಣನೂ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್​ ವ್ಯಂಗ್ಯವಾಡಿದರು.

    ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಪಾಪ ಯಡಿಯೂರಪ್ಪ ಅವರು ಬಹಳ ಹುರುಪಿನಿಂದ ಸರ್ಕಾರ ಮಾಡಿದರು. ಆದರೆ, ಅದೇ ಹುರುಪಿನಲ್ಲಿ ಬಜೆಟ್ ಮಾಡಲಾಗಿಲ್ಲ. ನನ್ನ ಕೈಯಲ್ಲಿ ಒಳ್ಳೆಯ ಬಜೆಟ್ ಕೊಡಲಾಗುತ್ತಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಕೇಂದ್ರದ ಜಿಎಸ್​ಟಿ ಫೇಲ್ ಆಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ ಎಂದು ಟೀಕಿಸಿದರು.

    ಇದನ್ನೂ ಓದಿ: ಬಿಎಸ್​ವೈ ಮಂಡಿಸಿದ ಬಜೆಟ್​ಗೆ ನಾನ್ಯಾಕೆ ಅಂಕ ಕೊಡಲಿ, ಜನರೇ ಕೊಡುತ್ತಾರೆ: ಮಾಜಿ ಸಿಎಂ ಎಚ್​ಡಿಕೆ

    ಪಾಪ ಬಿಎಸ್​ವೈ ಅವರಿಗೂ ಮಾತಾಡಲು ಶಕ್ತಿ ಕಾಣುತ್ತಿಲ್ಲ. ಯಾವ ಹುರುಪಿನಲ್ಲಿ ಸರ್ಕಾರ ಮಾಡಿದರೂ, ಅದೆಲ್ಲ ಈಗ ಕಾಣ್ತಿಲ್ಲ. ಹಳೆಯ ಯೋಜನೆಗಳಿಗೆ ಹೊಸ ಹೆಸರು ಕೊಟ್ಟಿದ್ದಾರೆ. ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅತ್ಯಂತ ದುರ್ಬಲ ಬಜೆಟ್ ಅಂದುಕೊಂಡಿದ್ದೆ. ಆದರೆ, ಆ ಬಜೆಟ್​ ಅನ್ನು ಮೀರಿಸಿದ ದುರ್ಬಲ ಬಜೆಟ್ ಇದಾಗಿದೆ. ಒಂದು ಹೊಸ ಪಾಲಿಸಿಯನ್ನು ಘೋಷಣೆ ಮಾಡಿಲ್ಲ ಎಂದು ಕಿಡಿಕಾರಿದರು.

    ಕೇಂದ್ರ ಹಾಗೂ ರಾಜ್ಯ ಸೇರಿ ಏನಾದರೂ ಮಾಡುತ್ತಾರೆ ಅಂದುಕೊಂಡಿದ್ದೆ. ಹಸಿರು ಶಾಲು ಹಾಕಿಕೊಂಡರೆ ರೈತರ ಬಜೆಟ್ ಆಗುವುದಿಲ್ಲ. ಈ ಬಜೆಟ್​ನಲ್ಲಿ ಶಕ್ತಿನೂ ಇಲ್ಲ, ಹಣನೂ ಇಲ್ಲ. ಒಂದು ದೂರದೃಷ್ಟಿ ಇಲ್ಲದ ಬಜೆಟ್ ಇದಾಗಿದೆ. ದಿಕ್ಕು ದೆಸೆ ಇಲ್ಲದ ಬಜೆಟ್ ಎಂದು ಡಿಕೆಶಿ ಲೇವಡಿ ಮಾಡಿದರು. (ದಿಗ್ವಿಜಯ ನ್ಯೂಸ್​)​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts