More

    ಹುಟ್ಟುಹಬ್ಬಕ್ಕೆ ಶ್ರೀಮುರಳಿ ನಿರೀಕ್ಷಿಸುತ್ತಿರುವ ದೊಡ್ಡ ಗಿಫ್ಟ್​ ಏನು ಗೊತ್ತಾ?

    ಬೆಂಗಳೂರು: ನಾಳೆ ಸ್ಯಾಂಡಲ್​ವುಡ್ ನಟ ಶ್ರೀಮುರಳಿ ಹುಟ್ಟುಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಒಂದೆರೆಡು ಚಿತ್ರಗಳ ಘೋಷಣೆಯಾಗುವ ಸಾಧ್ಯತೆ. ಈಗಾಗಲೇ ಹೊಂಬಾಳೆ ಫಿಲಂಸ್​ನ ಎಂಟನೇ ಪ್ರೊಡಕ್ಷನ್​ನಲ್ಲಿ ಮುರಳಿ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ.

    ಇದನ್ನೂ ಓದಿ: ಹಾಗಿದ್ದ ಗಣೇಶ್ ಆಚಾರ್ಯ, ಇದೀಗ ಹೀಗಾಗಿದ್ದಾರೆ …

    ಅಂದಹಾಗೆ, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಮುರಳಿ ತೀರ್ಮಾನಿಸಿದ್ದಾರೆ. ಅದಕ್ಕೆ ಕಾರಣ ಕೋವಿಡ್​. ತಮ್ಮಿಂದ ಯಾರಿಗೂ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ, ಮನೆಯಲ್ಲಿ ಇರದಿರಲು ಅವರು ನಿರ್ಧರಿಸಿದ್ದಾರೆ. ಮನೆಯ ಹತ್ತಿರ ಬಂದು ಹಾರೈಸುವುದಕ್ಕಿಂತ, ಇದ್ದಲ್ಲೇ ಹರಸಿ, ಹಾರೈಸಿ ಎಂದು ಮುರಳಿ ತಮ್ಮ ಅಭಿಮಾನಿಗಳಿಗೆ ಸೋಷಿಯಲ್​ ಮೀಡಿಯಾ ಮೂಲಕ ವಿನಂತಿಸಿಕೊಂಡಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ಈ ಬಾರಿ ನನ್ನ ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣ COVID! ನಮ್ಮಿಂದ ಯಾರಿಗೂ ಅನಾನುಕೂಲ ಆಗುವುದು ಬೇಡ. ಜತೆಗೆ, ನಾನು ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ. ಯಾರು ಸಹಿತ ಮನೆ ಹತ್ತಿರ ಬಂದು ಬೇಸರರಾಗಬೇಡಿ. ಹಾರ, ಕೇಕ್​, ಗಿಫ್ಟ್​ಗಳಿಗೆ ಖರ್ಚು ಮಾಡಬೇಡಿ. ಬದಲಿಗೆ, ಹಸಿದಿರುವವರಿಗೆ ಆದಷ್ಟು ಅನ್ನದಾನ ಮಾಡಿ ಎಂದು ನಮ್ಮ ಎಲ್ಲಾ ಸಂಘದ ಚಿನ್ನಗಳಿಗೆ ಈ ಮೂಲಕ ನಾನು ತಿಳಿಸುತ್ತಿದ್ದೀನಿ. ನಿಮ್ಮನ್ನು ನೋಡೋಕಾಗದ ಬೇಸರ ನನಗೂ ಇದೆ.

    ಹಾಗಾಗಿ, ಆದಷ್ಟು ಬೇಗ ಎಲ್ಲವೂ ಸುಧಾರಿಸಿದ ನಂತರ ಸಿಗೋಣ. ನಿಮ್ಮ ಪ್ರೀತಿ-ಅಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಹಾಗಾಗಿ ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟುಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಶ್ರೀಮುರಳಿ ಹೇಳಿಕೊಂಡಿದ್ದಾರೆ.

    ಇದನ್ನೂ ಓದಿ: ‘ಅಂತಿಮ್​’ನಲ್ಲಿ ಸಲ್ಮಾನ್​ ಬದಲು ಶಾರೂಖ್​ ನಟಿಸಬೇಕಿತ್ತಂತೆ …

    ಈ ವರ್ಷ ಕರೊನಾ ಹಾವಳಿಯಿಂದಾಗಿ ಕನ್ನಡದ ಯಾವ ನಟ ಸಹ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಶಿವರಾಜಕುಮಾರ್​, ಸುದೀಪ್​, ಗಣೇಶ್​, ಪ್ರಜ್ವಲ್​, ಸೇರಿದಂತೆ ಹಲವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈಗ ಮುರಳಿ ಸಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರುವುದಕ್ಕೆ ತೀರ್ಮಾನಿಸಿದ್ದಾರೆ.

    PHOTO GALLERY | ಬಿಕಿನಿ ಪೋಷಾಕಿನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್​ ಮಾದಕತೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts