ಬೆಂಗಳೂರು: ನಾಳೆ ಸ್ಯಾಂಡಲ್ವುಡ್ ನಟ ಶ್ರೀಮುರಳಿ ಹುಟ್ಟುಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಒಂದೆರೆಡು ಚಿತ್ರಗಳ ಘೋಷಣೆಯಾಗುವ ಸಾಧ್ಯತೆ. ಈಗಾಗಲೇ ಹೊಂಬಾಳೆ ಫಿಲಂಸ್ನ ಎಂಟನೇ ಪ್ರೊಡಕ್ಷನ್ನಲ್ಲಿ ಮುರಳಿ ಅಭಿನಯಿಸುತ್ತಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಹಾಗಿದ್ದ ಗಣೇಶ್ ಆಚಾರ್ಯ, ಇದೀಗ ಹೀಗಾಗಿದ್ದಾರೆ …
ಅಂದಹಾಗೆ, ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರಲು ಮುರಳಿ ತೀರ್ಮಾನಿಸಿದ್ದಾರೆ. ಅದಕ್ಕೆ ಕಾರಣ ಕೋವಿಡ್. ತಮ್ಮಿಂದ ಯಾರಿಗೂ ಅನಾನುಕೂಲವಾಗಬಾರದು ಎಂಬ ಕಾರಣಕ್ಕೆ, ಮನೆಯಲ್ಲಿ ಇರದಿರಲು ಅವರು ನಿರ್ಧರಿಸಿದ್ದಾರೆ. ಮನೆಯ ಹತ್ತಿರ ಬಂದು ಹಾರೈಸುವುದಕ್ಕಿಂತ, ಇದ್ದಲ್ಲೇ ಹರಸಿ, ಹಾರೈಸಿ ಎಂದು ಮುರಳಿ ತಮ್ಮ ಅಭಿಮಾನಿಗಳಿಗೆ ಸೋಷಿಯಲ್ ಮೀಡಿಯಾ ಮೂಲಕ ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ‘ಈ ಬಾರಿ ನನ್ನ ಹುಟ್ಟು ಹಬ್ಬವನ್ನು ನಿಮ್ಮೊಂದಿಗೆ ಆಚರಿಸಿಕೊಳ್ಳಲಾಗುವುದಿಲ್ಲ. ಕಾರಣ COVID! ನಮ್ಮಿಂದ ಯಾರಿಗೂ ಅನಾನುಕೂಲ ಆಗುವುದು ಬೇಡ. ಜತೆಗೆ, ನಾನು ಕಾರಣಾಂತರಗಳಿಂದ ಮನೆಯಲ್ಲಿ ಇರುವುದಿಲ್ಲ. ಯಾರು ಸಹಿತ ಮನೆ ಹತ್ತಿರ ಬಂದು ಬೇಸರರಾಗಬೇಡಿ. ಹಾರ, ಕೇಕ್, ಗಿಫ್ಟ್ಗಳಿಗೆ ಖರ್ಚು ಮಾಡಬೇಡಿ. ಬದಲಿಗೆ, ಹಸಿದಿರುವವರಿಗೆ ಆದಷ್ಟು ಅನ್ನದಾನ ಮಾಡಿ ಎಂದು ನಮ್ಮ ಎಲ್ಲಾ ಸಂಘದ ಚಿನ್ನಗಳಿಗೆ ಈ ಮೂಲಕ ನಾನು ತಿಳಿಸುತ್ತಿದ್ದೀನಿ. ನಿಮ್ಮನ್ನು ನೋಡೋಕಾಗದ ಬೇಸರ ನನಗೂ ಇದೆ.
ಹಾಗಾಗಿ, ಆದಷ್ಟು ಬೇಗ ಎಲ್ಲವೂ ಸುಧಾರಿಸಿದ ನಂತರ ಸಿಗೋಣ. ನಿಮ್ಮ ಪ್ರೀತಿ-ಅಕ್ಕರೆಯನ್ನು ನಾನು ತಿರಸ್ಕರಿಸುವುದಿಲ್ಲ. ನಿಮ್ಮ ಅಭಿಮಾನ, ಪ್ರೀತಿ, ಹಾರೈಕೆ ನನಗೆ ಇಂದು, ಎಂದೆಂದೂ ಬೇಕು. ಹಾಗಾಗಿ ನೀವು ಇರುವ ಕಡೆಯಿಂದಲೇ ನನ್ನನ್ನು ಹಾರೈಸಿ, ಆಶೀರ್ವದಿಸಿ. ಅದೇ ನೀವು ನನಗೆ ಹುಟ್ಟುಹಬ್ಬದಂದು ಕೊಡುವ ಬಹುದೊಡ್ಡ ಕಾಣಿಕೆ’ ಎಂದು ಶ್ರೀಮುರಳಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ: ‘ಅಂತಿಮ್’ನಲ್ಲಿ ಸಲ್ಮಾನ್ ಬದಲು ಶಾರೂಖ್ ನಟಿಸಬೇಕಿತ್ತಂತೆ …
ಈ ವರ್ಷ ಕರೊನಾ ಹಾವಳಿಯಿಂದಾಗಿ ಕನ್ನಡದ ಯಾವ ನಟ ಸಹ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ. ಶಿವರಾಜಕುಮಾರ್, ಸುದೀಪ್, ಗಣೇಶ್, ಪ್ರಜ್ವಲ್, ಸೇರಿದಂತೆ ಹಲವರು ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು. ಈಗ ಮುರಳಿ ಸಹ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳದಿರುವುದಕ್ಕೆ ತೀರ್ಮಾನಿಸಿದ್ದಾರೆ.
PHOTO GALLERY | ಬಿಕಿನಿ ಪೋಷಾಕಿನಲ್ಲಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ಮಾದಕತೆ…