More

    ಗಡಿ ರಸ್ತೆ ಪರಿಶೀಲಿಸಿದ ಎಸ್ಪಿ

    ಶ್ರೀಮಂಗಲ: ಕೋವಿಡ್-19 ತಡೆಗೆ ಲಾಕ್‌ಡೌನ್ ಸಂದರ್ಭ ಕುಟ್ಟ ಸಮೀಪದಲ್ಲಿ ಕೇರಳ-ಕರ್ನಾಟಕ ಗಡಿ ರಸ್ತೆಯನ್ನು ಪೊಲೀಸರು ಬಂದ್ ಮಾಡಿದ್ದು, ಗುರುವಾರ ಎಸ್ಪಿ ಕ್ಷಮಾ ಮಿಶ್ರಾ ಈ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

    ಈ ಭಾಗದಲ್ಲಿ ಕಾಡಾನೆಗಳ ಹೆಚ್ಚಾಗಿದ್ದರಿಂದ ರಾತ್ರಿ ವೇಳೆ ಪೊಲೀಸ್ ಸಿಬ್ಬಂದಿ ವಾಸ್ತವ್ಯ ಹೂಡಲು ಸಾಧ್ಯವಾಗಿರಲಿಲ್ಲ. ಈ ವೇಳೆ ಕೇರಳ ರಾಜ್ಯದಿಂದ ಕೊಡಗು ಜಿಲ್ಲೆಗೆ ಕೆಲವರು ನುಸುಳುತ್ತಿರುವ ಮಾಹಿತಿ ಬಂದ ಕಾರಣ ಎಸ್ಪಿ ಭೇಟಿ ನೀಡಿ ಮಾಹಿತಿ ಪಡೆದರು.

    ಸಿಪಿಐ ಪರಶಿವಮೂರ್ತಿ ಹಾಗೂ ಸಿಬ್ಬಂದಿ ತಮ್ಮ ಸಮಸ್ಯೆಗಳನ್ನು ಎಸ್ಪಿ ಬಳಿ ಹೇಳಿಕೊಂಡರು. ಕೋವಿಡ್- 19 ತಡೆಗಟ್ಟುವ ವಿಚಾರದಲ್ಲಿ ಪೊಲೀಸ್ ಇಲಾಖೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಲಾಖೆಯ ಸಿಬ್ಬಂದಿಗೆ ಕ್ಷಮಾ ಮಿಶ್ರಾ ನಿರ್ದೇಶನ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts