More

    ವಿಶೇಷ ರೈಲುಗಳ ಸಂಚಾರ

    ಹುಬ್ಬಳ್ಳಿ : ದಸರಾ ಹಬ್ಬದ ಹಿನ್ನೆಲೆಯಲ್ಲಿ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕಾಗಿ ನೈಋತ್ಯ ರೈಲ್ವೆ ವಲಯ ಮೈಸೂರು-ಧಾರವಾಡ-ಮೈಸೂರು ಮತ್ತು ಮೈಸೂರು -ವಿಜಯಪೂರ-ಮೈಸೂರು ಮಧ್ಯೆ ಹಾಗೂ ಎಸ್​ಎಸ್​ಎಸ್ ಹುಬ್ಬಳ್ಳಿ – ಮಂಗಳೂರು ಜಂಕ್ಷನ್ ಮಧ್ಯೆ ವಿಶೇಷ ರೈಲುಗಳ ಸಂಚಾರ ಪ್ರಾರಂಭಿಸಿದೆ.

    ಮೈಸೂರು-ಧಾರವಾಡ ರೈಲು ಅ. 22 ಮತ್ತು 24ರಂದು ರಾತ್ರಿ 10.35ಕ್ಕೆ ಮೈಸೂರಿನಿಂದ ಹೊರಟು, ಮಾರನೇ ದಿನ ಬೆಳಗ್ಗೆ 8 ಗಂಟೆಗೆ ಧಾರವಾಡ ತಲುಪಲಿದೆ. ಧಾರವಾಡ-ಮೈಸೂರು ರೈಲು ಅ. 23 ಮತ್ತು 25ರಂದು ಬೆಳಗ್ಗೆ 11.15ಕ್ಕೆ ಧಾರವಾಡದಿಂದ ಹೊರಟು, ಅದೇ ದಿನ ರಾತ್ರಿ 11.30ಕ್ಕೆ ಮೈಸೂರು ತಲುಪಲಿದೆ.

    ಮೈಸೂರು-ವಿಜಯಪೂರ ರೈಲು ಅ. 20ರಂದು ಸಂಜೆ 5.30ಕ್ಕೆ ಮೈಸೂರಿನಿಂದ ಹೊರಟು, ಮಾರನೇ ದಿನ ಬೆಳಗ್ಗೆ 10 ಗಂಟೆಗೆ ವಿಜಯಪುರು ತಲುಪುವುದು. ಅ. 21ರಂದು ಬೆಳಗ್ಗೆ 11.45ಕ್ಕೆ ವಿಜಯಪುರದಿಂದ ಹೊರಡುವ ಈ ರೈಲು, ಮಾರನೇ ದಿನ ಬೆಳಗ್ಗೆ 11.45ಕ್ಕೆ ಮೈಸೂರು ತಲುಪುವುದು.

    ಎಸ್​ಎಸ್​ಎಸ್ ಹುಬ್ಬಳ್ಳಿ-ಮಂಗಳೂರು ಜಂಕ್ಷನ್ ರೈಲು ಅ. 20 ಮತ್ತು 23ರಂದು ಮಧ್ಯಾಹ್ನ 3.30ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಹೊರಟು, ಮಾರನೇ ದಿನ ಬೆಳಗ್ಗೆ 9.40ಕ್ಕೆ ಮಂಗಳೂರು ಜಂಕ್ಷನ್ ತಲುಪುವುದು. ಮಂಗಳೂರು ಜಂಕ್ಷನ್​ನಿಂದ ಅ. 21 ಮತ್ತು 24ರಂದು ಬೆಳಗ್ಗೆ 11.40ಕ್ಕೆ ಹೊರಟು, ಮಾರನೇ ದಿನ ಬೆಳಗಿನಜಾವ 5.45ಕ್ಕೆ ಎಸ್​ಎಸ್​ಎಸ್ ಹುಬ್ಬಳ್ಳಿ ನಿಲ್ದಾಣ ತಲುಪುವುದು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts