More

    ಸೊಡರು ಪುಸ್ತಕ ಬಿಡುಗಡೆ

    ಮಡಿಕೇರಿ:

    ಜಿಲ್ಲೆಯ ಹಿರಿಯ ಪತ್ರಕರ್ತ ಬಿ.ಜಿ. ಅನಂತಶಯನ ಬರೆದಿರುವ ಪ್ರತಿಕೋದ್ಯಮ ಅನುಭವ ಆಧಾರಿತ ಸೊಡರು ಪುಸ್ತಕ ಭಾನುವಾರ ಸಂಜೆ ಅನಾವರಣಗೊಂಡಿತು. ನಗರದ ಖಾಸಗಿ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ರಾಜ್ಯ ಪ್ರೆಸ್‌ಕ್ಲಬ್ ಹಾಗೂ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಎ. ಪೊನ್ನಪ್ಪ ಸೊಡರು ಪುಸ್ತಕ ಬಿಡುಗಡೆ ಮಾಡಿದರು. ನಂತರ ಮಾತನಾಡಿ ಪತ್ರ್ರಿಕಾ ಕ್ಷೇತ್ರಕ್ಕೆ ಕಾಲಿಡುವವರಿಗೆ ಮಾರ್ಗದರ್ಶಕವಾಗಿ ಸೊಡರು ಪುಸ್ತಕ ರೂಪುಗೊಂಡಿರುವುದಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ತಮ್ಮ ಕಾರ್ಯವೈಖರಿಗಳ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಪಡೆದುಕೊಳ್ಳುವುದು ಅವಶ್ಯಕ. ಬ್ರೇಕಿಂಗ್ ನ್ಯೂಸ್‌ಗಳ ಧಾವಂತದ ಪತ್ರಿಕೋದ್ಯಮದ ನಡುವೆ ಸಾತ್ವಿಕವಾದ, ಸೃಜನಾತ್ಮಕವಾದ ಪತ್ರಿಕೋದ್ಯಮದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

    ಹಿರಿಯ ಪತ್ರಕರ್ತ ಟಿ.ಪಿ. ರಮೇಶ್ ಮಾತನಾಡಿ, ಪತ್ರಿಕಾ ಕ್ಷೇತ್ರದಲ್ಲಿ ಇರುವವರು ಓದುವ ಹವ್ಯಾಸವನ್ನು ಮೊದಲನೆಯದಾಗಿ ರೂಢಿಸಿಕೊಳ್ಳುವುದು ಅವಶ್ಯವೆಂದು ತಿಳಿಸಿದರು. ಈಗಿನಷ್ಟು ಸೌಲಭ್ಯಗಳು ಇಲ್ಲದಿದ್ದ ಕಾಲಘಟ್ಟದ ಪತ್ರಿಕೋದ್ಯಮದ ವಿಚಾರಗಳನ್ನು ಇಂದಿನವರಿಗೆ ತಿಳಿಸುವ ಕೆಲಸ ಇಂತಹ ಪುಸ್ತಕಗಳಿಂದ ಮಾಡಲು ಸಾಧ್ಯವಿದೆ ಎಂದರು.

    ಮತ್ತೊಬ್ಬ ಹಿರಿಯ ಪತ್ರಕರ್ತ ಜಿ.ರಾಜೇಂದ್ರ ಪತ್ರಿಕಾ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಎದುರಿಸುವ ಸಮಸ್ಯೆಗಳ ಕುರಿತು ತಮ್ಮ ಅನುಭವ ಹಂಚಿಕೊಂಡರು.

    ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ಅಸತ್ಯಗಳು ವೈಭವೀಕರಣವಾಗುತ್ತಿರುವ ಧಾವಂತದ ಈ ಕಾಲ ಘಟ್ಟದಲ್ಲಿ ಸತ್ಯವನ್ನು ಜನರಿಗೆ ತಲುಪಿಸುವ ಕಾರ್ಯ ಪತ್ರಿಕಾ ಕ್ಷೇತ್ರದಿಂದ ನಡೆಯುವಂತಾಗಲೆಂದು ಹಾರೈಸಿದರು.

    ಸನ್ಮಾನ:

    ಸಮಾರಂಭದ ಆರಂಭದಲ್ಲಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಶಿವಾನಂದ ತಗಡೂರು, ಎಂ.ಎ. ಪೊನ್ನಪ್ಪ, ಟಿ.ಪಿ. ರಮೇಶ್, ಜಿ.ರಾಜೇಂದ್ರ, ಅವರನ್ನು ಪುಸ್ತಕವನ್ನು ರಚಿಸಿದ ಬಿ.ಜಿ. ಅನಂತಶಯನ ಅವರ ಕುಟುಂಬಸ್ಥರು, ಆತ್ಮೀಯರು ಸನ್ಮಾನಿಸಿ ಗೌರವಿಸಿದರು.

    ಈ ವೇಳೆ ಮಾತನಾಡಿದ ಲೇಖಕ ಬಿ.ಜಿ. ಅನಂತಶಯನ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭದ ತನ್ನ ಅನುಭವಗಳನ್ನು ಪುಸ್ತಕದಲ್ಲಿ ತಾನು ದಾಖಲಿಸಿರುವುದಾಗಿ ತಿಳಿಸಿದರು. ಹಿರಿಯ ಪತ್ರಕರ್ತ ಹೆಚ್.ಟಿ. ಅನಿಲ್ ಪುಸ್ತಕ ಪರಿಚಯ ಮಾಡುತ್ತಾ, ಪತ್ರಿಕೋದ್ಯಮದ ಅನುಭವದ ಮತ್ತಷ್ಟು ಪುಸ್ತಕಗಳು ಅನಂತಶಯನ ಅವರಿಂದ ಮೂಡಿ ಬರಲಿ ಎಂದು ಹಾರೈಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts