More

    ಛಾವಣಿ ಕುಸಿದು ಯುವಕ ಸಾವು

    ಶ್ರೀನಗರ: ಮಧ್ಯ ಕಾಶ್ಮೀರದ ಬುಡ್ಗಾಮ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಾಂಕ್ರೀಟ್ ಚಪ್ಪಡಿ ಕುಸಿದು, ಯುವಕನೊಬ್ಬ ಮೃತಪಟ್ಟಿದ್ದು, ಆತನ ತಂದೆ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
    ಇಂದು ಬೆಳಿಗ್ಗೆ 11:30 ಕ್ಕೆ ವಾರ್ಸಂಗಂ ಗ್ರಾಮದಲ್ಲಿ ಚಪ್ಪಡಿ ಕುಸಿದಾಗ ತಂದೆ-ಮಗ ಇಬ್ಬರೂ ಕಾಂಕ್ರೀಟ್ ಚಪ್ಪಡಿ ಅಡಿ ಇದ್ದರೆಂದು ಎಂದು ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.

    ಇದನ್ನೂ ಓದಿ: ತುತ್ತತುದಿಗೇರಿತು ನೆಟ್ಟಿಗರ ಸಂಭ್ರಮ : ಅಷ್ಟಕ್ಕೂ ಉದ್ಯಮಿ ರತನ್ ಟಾಟಾ ಮಾಡಿದ್ದೇನು?

    ಮೃತನನ್ನು ಐಜಾಜ್ ಹಮೀದ್ ಭಟ್ (17) ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾನೆ ಎಂದು ಸೋಯಿಬುಗ್ ಪೊಲೀಸ್ ಠಾಣೆಯ ಉಸ್ತುವಾರಿ ಪೊಲೀಸ್ ಮುಷ್ತಾಕ್ ಅಹ್ಮದ್ ಹೇಳಿದ್ದಾರೆ.
    ಘಟನೆಯಲ್ಲಿ ಆತನ ತಂದೆ ಅಬ್ದುಲ್ ಹಮೀದ್ ಭಟ್ (50) ಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರನ್ನು ಬುಡ್ಗಾಮ್ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

    ಪುಣೆ ಪೊಲೀಸರ ‘ಡೇಂಜರಸ್ ಕಂಟೆಂಟ್’ ಏನು ಹೇಳುತ್ತದೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts