More

    ಸಿರವಾರಕ್ಕೆ ವಿಜಯೇಂದ್ರ ಆಗಮನ ನಾಳೆ

    ಸಿರವಾರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಮಾ.20ರಂದು ಪಟ್ಟಣಕ್ಕೆ ಆಗಮಿಸಲಿದ್ದಾರೆ ಎಂದು ಸಿರವಾರ ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಹಾಗೂ ಬಿಜೆಪಿ ಪ್ರಮುಖ ಜೆ.ದೇವರಾಜಗೌಡ ಹೇಳಿದರು.

    ಪಟ್ಟಣದಲ್ಲಿ ಶುಕ್ರವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ವಿಜಯೇಂದ್ರ ಲಿಂಗಸೂಗೂರಿನಲ್ಲಿ ಆಯೋಜಿಸಲಾಗಿರುವ ಎಸ್.ಟಿ ಮೋರ್ಚಾ ಸಭೆಗೆ ಭಾಗವಹಿಸಲು ತೆರಳುವ ಮಾರ್ಗದಲ್ಲಿ ಮಧ್ಯಾಹ್ನ 3ಕ್ಕೆ ಪಟ್ಟಣಕ್ಕೆ ಭೇಟಿ ನೀಡಲಿದ್ದಾರೆ. ಬೈಕ್ ರ‌್ಯಾಲಿ ಮೂಲಕ ಸ್ವಾಗತಿಸಲಾಗುವುದು. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೆ ಮಾಡುವರು. ನಂತರ ಬಸ್ ನಿಲ್ದಾಣ ಹತ್ತಿರ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳುವರು ಎಂದರು.

    ತಾಲೂಕಿನ ನೀರಾವರಿ ಯೋಜನೆಗಳು, ತಾಲೂಕು ಅಭಿವೃದ್ಧಿ, ತಾಲೂಕು ಆಡಳಿತ ಸೌಧ ಹಾಗೂ ವಿವಿಧ ಕಚೇರಿಗಳ ನಿರ್ಮಾಣದ ಬಗ್ಗೆ ವಿಜಯೇಂದ್ರ ಗಮನಕ್ಕೆ ತರಲಾಗುವುದು. ಎಂದು ಜೆ.ದೇವರಾಜಗೌಡ ತಿಳಿಸಿದರು. ಪ.ಪಂ. ಸದಸ್ಯ ಕೃಷ್ಣನಾಯಕ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ನರಸಿಂಹರಾವ್ ಕುಲಕರ್ಣಿ, ನಗರ ಘಟಕದ ಅಧ್ಯಕ್ಷ ಅಮರೇಶ ಎಚ್.ಕೆ., ಜಿಪಂ ಮಾಜಿ ಸದಸ್ಯ ಹನುಮಂತರಾಯ ಅತ್ತನೂರು, ತಾ.ಪಂ.ಮಾಜಿ ಸದಸ್ಯರಾದ ನಾಗನಗೌಡ ಅತ್ತನೂರು, ಸಿದ್ದರಾಮಯ್ಯ ಸ್ವಾಮಿ, ಈರಣ್ಣ ನಾಯಕ ಗಣದಿನ್ನಿ, ಶರಣಗೌಡ ಶಾಖಾಪುರ, ಸುಭಾಷ್ ಚಾಗಭಾವಿ, ಸುರೇಶಗೌಡ ನವಲಕಲ್, ಶಿವಶರಣರಗೌಡ ಲಕ್ಕಂದಿನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts