More

    ಬೇಸಿಗೆಯಲ್ಲಿ ಅರವಟಿಗೆ ಸೇವೆ ಶ್ಲಾಘನೀಯ ಕಾರ್ಯ

    ಸಿರಗುಪ್ಪ: ಸಾರ್ವಜನಿಕರ ದಾಹ ತಣಿಸಲು ಕುಡಿವ ನೀರಿನ ಅರವಟಿಗೆಯನ್ನು ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ತಹಸೀಲ್ದಾರ್ ಎನ್.ಆರ್.ಮಂಜುನಾಥಸ್ವಾಮಿ ತಿಳಿಸಿರು.

    ನಗರದ ತಾಲೂಕು ಕಚೇರಿ ಆವರಣ ಹಾಗೂ ನಗರಸಭೆ ಕಚೇರಿಯ ಪಕ್ಕ ವಿಷ್ಣುವಿಲಾಸ್ ಸಹಕಾರಿ ಸಂಘ ಆರಂಭಿಸಿರುವ ಅರವಟಿಗೆಯನ್ನು ಜನರಿಗೆ ಮಜ್ಜಿಗೆ ವಿತರಿಸುವ ಮೂಲಕ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

    ಸಹಕಾರಿಯ ಅಧ್ಯಕ್ಷ ಎಚ್.ಜೆ.ಹನುಮಂತಯ್ಯಶೆಟ್ಟಿ ಮಾತನಾಡಿ, ಹಲವು ವರ್ಷಗಳಿಂದ ನಗರಸಭೆ ಕಚೇರಿ ಬಳಿ ನೀರಿನ ಅರವಟಿಗೆ ಸ್ಥಾಪಸಿಸಿ, ಜನರ ದಾಹ ತೀರಿಸುತ್ತ ಬರಲಾಗಿದೆ. ಇದೇ ಮೊದಲ ಬಾರಿಗೆ ತಾಲೂಕು ಕಚೇರಿಯ ಅವರಣದಲ್ಲೂ ಅರವಟಿಗೆ ಪ್ರಾರಂಭಿಸಲಾಗಿದೆ ಎಂದರು.

    ನಗರಸಭೆ ಪೌರಾಯುಕ್ತ ಕೆ.ಜೀವನ್ ಕಟ್ಟಿಮನಿ, ನಗರಸಭೆ ಮಾಜಿ ಅಧ್ಯಕ್ಷ ಕೆ.ವೆಂಕಟರಾಮರೆಡ್ಡಿ, ಸಹಕಾರಿಯ ನಿರ್ದೇಶಕರಾದ ಬದ್ರಿನಾಥ, ಶ್ರೀರಾಮ, ಸಂತೋಷ, ಸುರೇಶ, ನಾಗರಾಜ, ವೆಂಕಟನರಸಯ್ಯ, ಸೂರ್ಯಪ್ರಕಾಶ, ಸಹಕಾರಿಯ ಸಿಇಒ ಬಿ.ಅನಿಲ್ ಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts