More

    ಒಂಟಿ ಮಹಿಳೆಯರೇ ಟಾರ್ಗೆಟ್ ಮಾಡಿ ಕೃತ್ಯ; ಕೊನೆಗೂ ಸೆರೆಸಿಕ್ಕ ಖದೀಮರು

    ಬೆಂಗಳೂರು: ಸರಗಳ್ಳತನ ಮತ್ತು ಮನೆ ಕಳವು ಮಾಡುತ್ತಿದ್ದ ಮೂವರು ಕುಖ್ಯಾತ ಕಳ್ಳರನ್ನು ಮಲ್ಲೇಶ್ವರ ಠಾಣೆ ಪೊಲೀಸರು ಬಂಧಿಸಿ 33.12 ಲಕ್ಷ ರೂ. ಮೌಲ್ಯದ 625 ಗ್ರಾಂ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ.

    ಜಯನಗರದ 4ನೇ ಬ್ಲಾಕ್ ನಿವಾಸಿ ಮೊಹಮ್ಮದ್ ಜಬೀವುದ್ದೀನ್ (32), ಮೊಹಮ್ಮದ್ ಮೊಮ್ತಾಬ್ (26) ಮತ್ತು ಮಾದನಾಯಕನಹಳ್ಳಿಯ ಜಗದೀಶ್‌ಕುಮಾರ್ ಅಲಿಯಾಸ್ ಜಗ್ಗ (38)ಬಂಧಿತರು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.

    ಮಲ್ಲೇಶ್ವರ 8ನೇ ಕ್ರಾಸ್‌ನಲ್ಲಿ 64 ವರ್ಷದ ವೃದ್ಧೆ, ಅ.21ರ ಸಂಜೆ ವಾಯು ವಿಹಾರದಲ್ಲಿ ಇದ್ದಾಗ ಆರೋಪಿ, ಹಿಂಭಾಗದಿಂದ ಬಂದು 30 ಗ್ರಾಂ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದ. ವೃದ್ಧೆಯೂ ನೀಡಿದ ದೂರು ಆಧರಿಸಿ ಪೊಲೀಸರು, ಕೃತ್ಯ ನಡೆದ ಸ್ಥಳದ ಅಕ್ಕಪಕ್ಕ ರಸ್ತೆಯಲ್ಲಿ ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಿ ಆರೋಪಿಯ ಸುಳಿವು ಪತ್ತೆ ಮಾಡಿ ಬಂಧಿಸಿದ್ದಾರೆ. ಓರ್ವನ ಬಂಧನದಿಂದ ಇನ್ನಿಬ್ಬರು ಸೆರೆಸಿಕ್ಕಿದ್ದಾರೆ.

    ಬಂಧಿತರು ಹಳೆಯ ಆರೋಪಿಗಳಾಗಿದ್ದು, ಜಯನಗರ ಠಾಣೆ ಪೊಲೀಸರು ಅಕ್ಟೋಬರ್‌ನಲ್ಲಿ 2 ಸುಲಿಗೆ ಪ್ರಕರಣದಲ್ಲಿ ವಾರಂಟ್‌ನಲ್ಲಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. 12 ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ತೊಡಗಿ 75ಕ್ಕೂ ಹೆಚ್ಚು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts