More

    ಸಿದ್ದು, ಯತೀಂದ್ರಗೆ ಪ್ರಚಾರದ ಹುಚ್ಚು: ಈಶ್ವರಪ್ಪ ವಾಗ್ದಾಳಿ

    ಶಿವಮೊಗ್ಗ: ಸಿಎಂ ಸಿದ್ದರಾಮಯ್ಯ ಅವರಿಗೆ ಮುಸ್ಲಿಂರ ಮೇಲೆ ಮಾತ್ರ ಪ್ರೀತಿ. ಉಳಿದವರ ಬಗ್ಗೆ ಅವರಿಗೆ ಕಾಳಜಿಯಿಲ್ಲ. ಇನ್ನು ಅವರ ಪುತ್ರ ಹಿಂದು ವಿರೋಧಿ ಹೇಳಿಕೆ ನೀಡುತ್ತಿದ್ದಾರೆ. ಅವರಿಬ್ಬರೂ ಮುಸ್ಲಿಂಗೆ ಮತಾಂತರಗೊಂಡು ಪಾಕಿಸ್ತಾನಕ್ಕೆ ಹೋಗಲಿ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮುಸಲ್ಮಾನರನ್ನು ಓಲೈಸಲು ಅಪ್ಪ, ಮಗ ಈ ರೀತಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರಿಬ್ಬರಿಗೂ ರಾಷ್ಟ್ರಭಕ್ತಿಯಿಲ್ಲ. ಇಬ್ಬರಿಗೂ ಪ್ರಚಾರದ ಹುಚ್ಚು ಹೆಚ್ಚಾಗಿದೆ. ಅವರಿಬ್ಬರಿಗೂ ಈ ದೇಶದಲ್ಲಿರಲು ಯೋಗ್ಯತೆಯೇ ಇಲ್ಲ ಎಂದು ಟೀಕೀಸಿದರು.
    ಭಾರತ ಹಿಂದು ರಾಷ್ಟ್ರವಾದರೆ ಪಾಕಿಸ್ತಾನದಂತೆ ದಿವಾಳಿಯಾಗಲಿದೆ ಎಂಬ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ನನ್ನ ವಿರೋಧವಿದೆ. ಸಿದ್ದರಾಮಯ್ಯ ಪುತ್ರ ಎಂಬ ಕಾರಣಕ್ಕೆ ಯತೀಂದ್ರ ಹೇಳಿಕೆಗೆ ಮಹತ್ವ ಸಿಗುತ್ತಿದೆ ಅಷ್ಟೇ ಎಂದು ಕಿಡಿಕಾರಿದರು.
    ನಮ್ಮ ದೇಶದಲ್ಲಿ ಎಲ್ಲ ಧಾರ್ಮಿಕ ಕೇಂದ್ರಗಳಿಗೂ ಗೌರವ ನೀಡಲಾಗುತ್ತದೆ. ಆದರೆ ಪಾಕಿಸ್ತಾನದಲ್ಲಿ ಮುಸ್ಲಿಂರು ಅವರ ಧರ್ಮಗುರುಗಳನ್ನೇ ಗುಂಡಿಕ್ಕಿ ಕೊಲ್ಲುತ್ತಾರೆ. ಮಸೀದಿ, ದರ್ಗಾಗಳಲ್ಲಿ ಬಾಂಬ್ ಸ್ಫೋಟಿಸುತ್ತಾರೆ. ಇದೇ ಭಾರತ ಹಾಗೂ ಪಾಕಿಸ್ತಾನದ ನಡುವೆ ಇರುವ ಅಂತರ. ಇದನ್ನು ಯತೀಂದ್ರ ಅರಿತುಕೊಳ್ಳಲಿ ಎಂದರು.
    ಕಾಂಗ್ರೆಸ್‌ಗೆ ಕೇಡುಗಾಲ: ರಾಜ್ಯ ಕಾಂಗ್ರೆಸ್‌ಗೆ ಕೇಡುಗಾಲ ಬಂದಿದೆ. ಧರ್ಮದ ಬಗ್ಗೆ ಕಾಂಗ್ರೆಸ್ ನಾಯಕರು ಉದ್ದೇಶಪೂರ್ವಕವಾಗಿ ಮಾತನಾಡುತ್ತಾರೋ? ಪ್ರಚಾರಕ್ಕಾಗಿ ಮಾತನಾಡುತ್ತಾರೋ? ತಿಳಿಯುತ್ತಿಲ್ಲ. ಒಟ್ಟಾರೆ ಅರ್ಥಹೀನ ಹೇಳಿಕೆ ನೀಡುತ್ತಿರುವುದಂತೂ ನಿಜ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗೋದ್ರಾ ಘಟನೆಯನ್ನು ನೆನಪಿಸಿದ್ದಾರೆ. ಇದನ್ನು ಗಮನಿಸಿದರೆ ಗಲಾಟೆ ನಡೆಸಲು ಪೂರ್ವ ತಯಾರಿ ನಡೆಸಿದಂತೆ ಕಾಣುತ್ತಿದೆ. ಹರಿಪ್ರಸಾದ್ ಭಯೋತ್ಪಾದನಾ ಸಂಘಟನೆಯಲ್ಲಿದ್ದಾರೋ ತಿಳಿಯುತ್ತಿಲ್ಲ. ನಾಳೆ ಏನಾದರೂ ಅನಾಹುತ ಸಂಭವಿಸಿದರೆ ಅದಕ್ಕೆ ಹರಿಪ್ರಸಾದ್ ಹೊಣೆಗಾರರು. ಕೂಡಲೇ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕೆಂದು ಗೃಹಸಚಿವರನ್ನು ಆಗ್ರಹಿಸುತ್ತೇನೆ ಎಂದು ಕೆ.ಎಸ್.ಈಶ್ವರಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts