More

    ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿ ಉರಿದ ಕಾರು, ಸಮಯಪ್ರಜ್ಞೆಯಿಂದಾಗಿ ಕಾರಲ್ಲಿದ್ದವರು ಪಾರು

    ಬೊಮ್ಮನಹಳ್ಳಿ: ಕಾರೊಂದರಲ್ಲಿ ಇದ್ದಕ್ಕಿದ್ದ ಹಾಗೆ ಬೆಂಕಿ ಕಾಣಿಸಿಕೊಂಡು, ಕಾರು ಹೊತ್ತಿ ಉರಿದಿದ್ದು, ಒಳಗಿದ್ದವರು ತಮ್ಮ ಸಮಯಪ್ರಜ್ಞೆಯಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೊಮ್ಮನಹಳ್ಳಿಯ ಎಚ್​.ಎಸ್​.ಆರ್​. ಬಿಡಿಎ ಕಾಂಪ್ಲೆಕ್ಸ್ ಬಳಿ ಬುಧವಾರ ಈ ಅವಘಡ ಸಂಭವಿಸಿದೆ.

    ಕಾರನ್ನು ಪಾರ್ಕ್​ ಮಾಡಲಾಗಿದ್ದು, ಕಾರಿನಲ್ಲಿದ್ದವರು ಇನ್ನೂ ಒಳಗಿರುವಾಗಲೇ ಬೆಂಕಿ ಹೊತ್ತಿಕೊಂಡಿದೆ. ಸುಟ್ಟ ವಾಸನೆ ಬಂದಿದ್ದರಿಂದ ಒಳಗಿದ್ದವರು ತಕ್ಷಣ ಹೊರಗೆ ಬಂದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

    ಇದನ್ನೂ ಓದಿ: ಮದ್ವೆಗೆ ಹೋಗಿದ್ದ ಇಬ್ಬರು ಬಸ್ಸಲ್ಲೇ ಸುಟ್ಟು ಸಾವು; ಲಾರಿ-ಬಸ್​ ಡಿಕ್ಕಿ, ಧಗಧಗಿಸಿ ಉರಿದ ಬಸ್​… 

    ಶಾರ್ಟ್​ ಸರ್ಕ್ಯೂಟ್​ನಿಂದಾಗಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗಿದೆ. ಕಾರು ಹೊತ್ತಿ ಉರಿಯುತ್ತಿದ್ದುದನ್ನು ಗಮನಿಸಿದ ಸಾರ್ವಜನಿಕರು ನೀರು ಹಾಕಿ ಬೆಂಕಿಯನ್ನು ಆರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಸಂಭಾವ್ಯ ಹೆಚ್ಚಿನ ಹಾನಿ ಹಾಗೂ ಅಪಾಯ ತಪ್ಪಿಹೋದಂತಾಗಿದೆ.

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಇನ್ನೂ ಮೂವರು ಪ್ರಭಾವಿ ರಾಜಕಾರಣಿಗಳ ಸಿಡಿ ನನ್ನ ಬಳಿ ಇದೆ, ಎಲ್ಲರೂ ಹಾಲಿಗಳೇ…

    ಆ್ಯಸಿಡ್ ದಾಳಿಯಿಂದಾಗಿ ಕಣ್ಣು ಕಳೆದುಕೊಂಡಳು, ರೂಪ ಕಳೆದುಕೊಂಡಳು; ಆದ್ರೂ ಮದುವೆ ಆಗಲು ಹುಡುಗ ಸಿಕ್ಕಿದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts