More

    ಗೆಳೆಯರ ಬಳಗದಿಂದ 6ರಂದು ಎಜೆಆರ್‌ಗೆ ಅಭಿನಂದನೆ ಅಭಿವಂದನೆ

    ಶಿವಮೊಗ್ಗ: ಸಾಮಾಜಿಕ, ಶೈಕ್ಷಣಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಸಾಧಕ ಎ.ಜೆ.ರಾಮಚಂದ್ರ(ಅಮರಗೊಳ್ಳ ಜಯರಾಮಾಚಾರ ರಾಮಚಂದ್ರ) ಅವರ 70ನೇ ಸಂವತ್ಸರಗಳ ಸ್ಮರಣಾರ್ಥ ಎಜೆಆರ್‌ಗೆ ಅಭಿನಂದನೆ ಅಭಿವಂದನೆಯನ್ನು ಸೆ.6ರಂದು ಸಂಜೆ 6ಕ್ಕೆ ಶುಭಮಂಗಳ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿ ಅಧ್ಯಕ್ಷ ಬಿ.ಸಿ.ನಂಜುಂಡಶೆಟ್ಟಿ ತಿಳಿಸಿದರು.
    ಸತತ ನಾಲ್ಕು ದಶಕಗಳ ಕಾಲ ಹಲವು ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದು ಚಿಕ್ಕ ವಯಸ್ಸಿನಿಂದಲೇ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಿ ಇದೀಗ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದಾರೆ. ಸಹೃದಯಿ, ಸರಳ ಜೀವಿಯೂ ಆಗಿರುವ ಎಜಿಆರ್ ನಿಖರವಾದಿಗಳೂ, ಚಿಂತನಾಶೀಲರು ಆಗಿದ್ದಾರೆ. ಅವರ ಅಭಿಮಾನಿ ಮತ್ತು ಗೆಳೆಯರ ಬಳಗದಿಂದ ವಿಶಿಷ್ಟವಾಗಿ ಅಭಿನಂದನೆ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸೋಮವಾರ ಮಥುರಾ ಪ್ಯಾರಡೈಸ್‌ನಲ್ಲಿ ಹೇಳಿದರು.
    18ನೇ ವಯಸ್ಸಿನಲ್ಲೇ ಜನಸಂಘದ ಸಂಪರ್ಕ, 20ನೇ ವಯಸ್ಸಿನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕಾಲಿರಿಸಿದರು. 1977ರ ವೇಳೆಗೆ ವಿಶ್ವ ಹಿಂದೂ ಪರಿಷತ್ ಕಾರ್ಯದರ್ಶಿಯಾಗಿ, 1989ರಲ್ಲಿ ವಿಕಾಸ ವಿದ್ಯಾ ಸಮಿತಿಯ ಪ್ರಾಥಮಿಕ ಶಾಲೆಯ ಕಾರ್ಯದರ್ಶಿಯಾಗಿ ಮೂರು ದಶಕ ದುಡಿದು 1500ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತಿರುವ ಸಂಸ್ಥೆಗೆ ಕಾರಣರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಅಭಿನಂದನೆ-ಅಭಿವಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
    ಸಮಿತಿ ಉಪಾಧ್ಯಕ್ಷ ಕೆ.ಸಿ.ನಟರಾಜ್ ಭಾಗವತ್ ಮಾತನಾಡಿ, ಕೇಂದ್ರ ಸಂಸದೀಯ ಮಂಡಳಿ ಸದಸ್ಯ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಎಜಿಆರ್ ಅವರನ್ನು ಅಭಿನಂದಿಸುವರು. ಶಾಸಕ ಕೆ.ಎಸ್.ಈಶ್ವರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಎಂಎಲ್‌ಸಿಗಳಾದ ಆಯನೂರು ಮಂಜುನಾಥ್, ಎಸ್.ರುದ್ರೇಗೌಡ, ಡಿ.ಎಸ್.ಅರುಣ್ ಮುಖ್ಯ ಅತಿಥಿಗಳಾಗಿರುವರು. ಹಿರಿಯ ಪತ್ರಕರ್ತ ದು.ಗು.ಲಕ್ಷ್ಮಣ ಅವರು ಎಜೆಆರ್ ಬಗ್ಗೆ ದಿಕ್ಸೂಜಿ ಭಾಷಣ ಮಾಡುವರು. ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಟ್ಟಾಭಿರಾಮ್ ಅಭಿನಂದನಾ ಆಶಯಗಳನ್ನು ವ್ಯಕ್ತಪಡಿಸುವರು ಎಂದರು.
    ಬಿ.ಸಿ.ನಂಜುಂಡಶೆಟ್ಟಿ ಅವರು ಅಧ್ಯಕ್ಷತೆ ವಹಿಸಲಿದ್ದು ಸಂಜೆ 5.30ರಿಂದ ಪ್ರಹ್ಲಾದ್ ದೀಕ್ಷಿತ್ ಅವರಿಂದ ಸುಮಧುರ ಗಾಯನ ಏರ್ಪಡಿಸಲಾಗಿದೆ ಎಂದು ಹೇಳಿದರು. ಸಮಿತಿ ಉಪಾಧ್ಯಕ್ಷ ಎಸ್.ಕೆ.ಶೇಷಾಚಲ, ದೇವದಾಸ ನಾಯಕ್, ಜಿನರಾಜ್ ಜೈನ್, ವಿ. ರಾಜು, ಖಜಾಂಚಿ ಕೆ.ಈ.ಕಾಂತೇಶ್, ಸಂಚಾಲಕ ಎಂ.ಶಂಕರ್, ಸಹ ಸಂಚಾಲಕ ಎನ್.ಡಿ.ಸತೀಶ್ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts