More

    ಜ.10ರಂದು ಬೆಂಗಳೂರಿನಲ್ಲಿ ಶಿರಸಂಗಿ ಲಿಂಗರಾಜರ ಜಯಂತಿ

    ವಿಜಯಪುರ: ಮಹಾದಾನಿ ಶಿರಸಂಗಿ ಲಿಂಗರಾಜ ದೇಸಾಯಿ ಅವರ 160ನೇ ಜಯಂತಿಯನ್ನು ಬೆಂಗಳೂರಿನ ವಿಜಯನಗರದ ಭಂಟರ ಸಂಘದ ಸಭಾ ಭವನದಲ್ಲಿ ಜ.10ರಂದು ಬೆಳಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಶಂಕರಗೌಡ ಪಾಟೀಲ ಹೇಳಿದರು.
    ಇಲ್ಲಿನ ಲಿಂಗರಾಜ ವಿವಿಧೋದ್ಧೇಶ ಸಂಸ್ಥೆಯಲ್ಲಿ ಜಯಂತಿ ನಿಮಿತ್ತ ಸೋಮವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಅಂದು ನಡೆಯಲಿರುವ ಕಾರ್ಯಕ್ರಮದ ಸಾನಿಧ್ಯವನ್ನು ಯಡಿಯೂರು ತೋಂಟದಾರ್ಯ ಶ್ರೀಗಳಾದ ಡಾ. ಸಿದ್ಧರಾಮ ಸ್ವಾಮೀಜಿ, ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಬಸವಜಯಮೃತ್ಯುಂಜಯ ಸ್ವಾಮೀಜಿ, ಹರಿಹರದ ವಚನಾನಂದ ಸ್ವಾಮೀಜಿ, ಅಥಣಿಯ ಶಿವಬಸವ ಸ್ವಾಮೀಜಿ, ಇಂಡಿಯ ಸ್ವರೂಪಾನಂದ ಸ್ವಾಮೀಜಿ ವಹಿಸಲಿದ್ದಾರೆ.

    ವಸತಿ ಸಚಿವ ವಿ. ಸೋಮಣ್ಣ ಕಾರ್ಯಕ್ರಮ ಉದ್ಘಾಟಿಸುವರು. ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೀರಶೈವ ಮಹಾಸಭೆ ಅಧ್ಯಕ್ಷ ಡಾ. ಶಾಮನೂರ ಶಿವಶಂಕರಪ್ಪ, ಕೆಎಲ್‌ಇ ಸಂಸ್ಥೆ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೊರೆ, ಮಾಜಿ ಸಚಿವರಾದ ಬಸವರಾಜ ಹೊರಟ್ಟಿ, ಎಂ. ಕೃಷ್ಣಪ್ಪ ಭಾಗವಹಿಸಲಿದ್ದು, ಮಾಜಿ ಸಚಿವ, ಶಾಸಕ ಎಂ.ಬಿ. ಪಾಟೀಲ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
    ಮುಖಂಡ ಎ.ಎಸ್. ಪಾಟೀಲ ತಾಜಪೂರ ಮಾತನಾಡಿ, ಲಿಂಗಾಯತ ಕುಡುಒಕ್ಕಲಿಗ ಸಮುದಾಯವನ್ನು ಮುಂದಿನ ದಿನಗಳಲ್ಲಿ ಪ್ರವರ್ಗ 2ಎ ನಲ್ಲಿ ಸೇರಿಸಲು ಅಗತ್ಯ ಕ್ರಮ ಜರುಗಿಸಬೇಕು. ಮೂಲತಃ ಒಕ್ಕಲಿಗರಂತೆ ಕೃಷಿ ಕಾಯಕ ಮಾಡುತ್ತಿದ್ದಾರೆ. ಅವರಿಗೆ ಸರ್ಕಾರದ ಸೌಲಭ್ಯಗಳು ದೊರಕುವಂತಾಗಬೇಕು ಎಂದು ಒತ್ತಾಯಿಸಿದರು.

    ಮುಖಂಡರಾದ ಕೆ.ಎಂ. ಪಾಟೀಲ ತೊರವಿ, ಸಿದ್ದಣ್ಣ ಉತ್ನಾಳ, ಮಲ್ಲು ಕೆಸರಟ್ಟಿ, ಮಲ್ಲನಗೌಡ ಬಿರಾದಾರ, ಭೀಮನಗೌಡ ಪಾಟೀಲ ಕೊಟ್ಯಾಳ, ಕಾಶಿನಾಥಗೌಡ ಪಾಟೀಲ, ಕೆ.ಕೆ. ಪಾಟೀಲ ತೊರವಿ, ಸುರೇಶಗೌಡ ಪಾಟೀಲ ತೊರವಿ, ಬಸು ಜನಗೊಂಡ, ಪ್ರಕಾಶಗೌಡ ಪಾಟೀಲ ಕಾಖಂಡಕಿ, ಕೆ.ಎಸ್. ಬಿರಾದಾರ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts