More

    4ಕ್ಕೆ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನ, ಉಡುಗಣಿಯ ಕು.ಅಮೃತಾ ಸರ್ವಾಧ್ಯಕ್ಷೆ

    ಶಿಕಾರಿಪುರ: ತಾಲೂಕು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ, ತಾಲೂಕು ಜಾನಪದ ಪರಿಷತ್, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜ.4ರಂದು ಬನಸಿರಿ ಲಯನ್ಸ್ ವಿದ್ಯಾಸಂಸ್ಥೆಯಲ್ಲಿ 6ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ಕೆ.ಎಸ್.ಹುಚ್ರಾಯಪ್ಪ ಹೇಳಿದರು.

    ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷೆಯಾಗಿ ಬಹುಮುಖ ಪ್ರತಿಭೆ ಬನಸಿರಿ ಲಯನ್ಸ್ ಶಾಲೆ ವಿದ್ಯಾರ್ಥಿನಿ ಉಡುಗಣಿಯ ಕು.ಜಿ.ಅಮೃತಾ ಆಯ್ಕೆಯಾಗಿದ್ದಾರೆ. ಅಮೃತಾ 40ಕ್ಕೂ ಹೆಚ್ಚಿನ ಗೋಷ್ಠಿಯಲ್ಲಿ ಭಾಗವಹಿಸಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಬುಧವಾರ ತಿಳಿಸಿದರು.

    ಜ.4ರಂದು ಬೆಳಗ್ಗೆ 10 ಗಂಟೆಗೆ ಮೆರವಣಿಗೆಗೆ ಪಟ್ಟಣ ಠಾಣೆ ಪಿಎಸ್​ಐ ರಾಜುರೆಡ್ಡಿ ಚಾಲನೆ ನೀಡಲಿದ್ದಾರೆ. ಬಾಪೂಜಿ ವಿದ್ಯಾಸಂಸ್ಥೆಯ ದ್ವಿತೀಯ ಪಿಯು ವಿದ್ಯಾರ್ಥಿನಿ ಮಹಾಲಕ್ಷ್ಮೀ ಕಾರ್ಯಕ್ರಮ ಉದ್ಘಾಟಿಸುವರು. ಜಾನಪದ ಪರಿಷತ್ ಅಧ್ಯಕ್ಷ ಬಿ.ಪಾಪಯ್ಯ ಪ್ರಾಸ್ತಾವಿಕವಾಗಿ ಮಾತನಾಡುವರು. ಕು.ಸೌಂದರ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ, ಆದಿತ್ಯ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ, ಅನುಷಾ ಅಧ್ಯಕ್ಷತೆಯಲ್ಲಿ ಭಾಷಣಗೋಷ್ಠಿ ಏರ್ಪಡಿಸಲಾಗಿದೆ.

    ತಹಸೀಲ್ದಾರ್​ಎಂ.ಪಿ.ಕವಿರಾಜ್, ಎಎಸ್​ಪಿ ಶ್ರೀನಿವಾಸುಲು, ಬಿಇಒ ಉಮಾಮಹೇಶ್, ಲಯನ್ಸ್ ಕ್ಲಬ್ ಅಧ್ಯಕ್ಷ ಎಚ್.ಬಿ.ಜಯದೇವಪ್ಪ, ಬನಸಿರಿ ಲಯನ್ಸ್ ವಿದ್ಯಾಸಂಸ್ಥೆ ಅಧ್ಯಕ್ಷ ಎಸ್.ಶಿವಾನಂದ ಶಾಸ್ತ್ರಿ, ಡಾ.ಅಮ್ಜದ್ ಹುಸೇನ್ ಕರ್ನಾಟಕಿ, ಪುರಸಭೆ ಮುಖ್ಯಾಧಿಕಾರಿ ಸುರೇಶ್, ರೆ.ಫಾ.ಸಂತೋಷ್ ವಿನ್ಸೆಂಟ್ ಡಿ ಅಲ್ಮೆಡಾ, ಚನ್ನಯ್ಯ, ಗ್ರಾಮಾಂತರ ಠಾಣೆ ಇನ್ಸ್​ಪೆಕ್ಟರ್ ರವಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೋಡೆಪ್ಪ, ಪುಟ್ಟರಾಜು, ಮುರುಳೀಧರ್, ಟಿ.ಎಸ್.ಗಣಪತಿ ಭಟ್, ರಾಜ್​ಕುಮಾರ್, ಸಿದ್ದಾರೂಢ ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts