ಶಿವಮೊಗ್ಗ: ನವುಲೆಯ ಎಲ್ಬಿಎಸ್ ನಗರದ ಬಳಿ ಬೈಕ್ಗಳು ಮತ್ತು ಹಾಲಿನ ವಾಹನದ ನಡುವೆ ಸರಣಿ ಅಪಘಾತದಲ್ಲಿ ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನ ಟೆಲಿ ಕಮ್ಯೂನಿಕೇಷನ್ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿ ಆರ್.ಪುನೀತ್ (21) ಮೃತಪಟ್ಟಿದ್ದು ಮತ್ತೊಂದು ಬೈಕ್ ಸವಾರ ಸಣ್ಣಪುಟ್ಟ ಗಾಯಗೊಂಡಿದ್ದಾರೆ.
ಕಾಶಿಪುರದ ಪುನೀತ್ ಎಂದಿನಂತೆ ತನ್ನ ಕೆಟಿಎಂ ಬೈಕ್ನಲ್ಲಿ ಕಾಲೇಜಿಗೆ ತೆರಳುವಾಗ ಎದುರಿನಿಂದ ಬಂದ ಬೈಕ್ ನಡುವೆ ಡಿಕ್ಕಿಯಾಗಿದೆ. ಬಳಿಕ ಕೆಎಂಎಫ್ ಹಾಲಿನ ವಾಹನಕ್ಕೆ ಕೆಟಿಎಂ ಬೈಕ್ ಡಿಕ್ಕಿಯಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದ ಪುನೀತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪೂರ್ವ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.