More

    ನನ್ನ ಮನೆ ಮುಂದಿರುವ ಪಾರ್ಕಿಂಗ್ ಸಮಸ್ಯೆಯನ್ನು ಬಗೆಹರಿಸಿ ಎಂದು ಸಿಎಂ ಕಾರನ್ನು ತಡೆದ ವೃದ್ಧ!

    ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾವೇರಿ ನಿವಾಸದ ಎದುರು ವಾಸಿಸುತ್ತಿದ್ದ ಹಿರಿಯ ನಾಗರಿಕರೊಬ್ಬರು ತಮ್ಮ ಮನೆಯ ಮುಂದೆ ನಿಮ್ಮ ಕಾರುಗಳನ್ನು ಹೆಚ್ಚಾಗಿ ನಿಲುಗಡೆ ಮಾಡುತ್ತಿರುವುದರಿಂದ ಪಾರ್ಕಿಂಗ್​ ಸಮಸ್ಯೆ ಉಲ್ಬಣಗೊಂಡಿದೆ. ಇದರಿಂದ ನನಗೆ ಮತ್ತು ನನ್ನ ಕುಟುಂಬಕ್ಕೆ ಬಹಳ ತೊಂದರೆಯಾಗಿದೆ ಎಂದು ಸಿಎಂ ಕಾರು ತಡೆದು ಹೇಳಿದ್ದಾರೆ.

    ಇದನ್ನೂ ಓದಿ: Yashpal Suvarna’s Controversial Statement About G. Parameshwar’s Son | ಜಿ. ಪರಮೇಶ್ವರ್​ ಪುತ್ರನ ಬಗ್ಗೆ ಯಶ್​ಪಾಲ್​ ಸುವರ್ಣ ವಿವಾದಾತ್ಮಕ ಹೇಳಿಕೆ

    ಸಿಎಂ ಮನೆಯ ಹೊರಗೆ ಆಗ್ರಹಿಸಿದ ವೃದ್ಧ, ಮುಖ್ಯಮಂತ್ರಿಯನ್ನು ಭೇಟಿಯಾಗಲು ಬರುವ ಜನರು ತಮ್ಮ ವಾಹನಗಳನ್ನು ನಮ್ಮ ಮನೆ ಮುಂದೆ ನಿಲ್ಲಿಸಿ ಹೋಗುತ್ತಾರೆ. ಕಳೆದ ಐದು ವರ್ಷಗಳಿಂದ ಈ ಸಮಸ್ಯೆಯನ್ನು ನೋಡಿ ನಾವು ಬೇಸತ್ತಿದ್ದೇವೆ. ಕೂಡಲೇ ನಮಗೆ ಈ ತೊಂದರೆಯನ್ನು ಬಗೆಹರಿಸಿ ಎಂದು ಸಿದ್ದರಾಮಯ್ಯ ಅವರ ಕಾರನ್ನು ತಡೆದು ಒತ್ತಾಯಿಸಿದರು.

    ವೃದ್ಧರ ಮಾತನ್ನು ಆಲಿಸಿದ ಸಿದ್ದರಾಮಯ್ಯ, ಈ ಬಗ್ಗೆ ಪರಿಶೀಲನೆ ನಡೆಸಿ ಪಾರ್ಕಿಂಗ್ ಸಮಸ್ಯೆ ಬಗೆಹರಿಸುವಂತೆ ಭದ್ರತಾ ಸಿಬ್ಬಂದಿಗೆ ಸೂಚಿಸಿದರು,(ಏಜೆನ್ಸೀಸ್).

    ರೈತನ ಮನೆಯಿಂದ ರಾತ್ರೋ ರಾತ್ರಿ ಚಿನ್ನಾಭರಣವಿದ್ದ ಬೀರು ಕದ್ದ ಕಳ್ಳರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts