ಕೊಳ್ಳೇಗಾಲ: ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಗೆ ಜಿಲ್ಲೆಯಿಂದ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ನ.25ರಂದು ಗದಗದ ಹುಲಕೋಟೆಯ ರಾಜರಾಜೇಶ್ವರಿ ಸಿಬಿಎಸ್ಸಿ ಪ್ರೌಢಶಾಲೆಯಲ್ಲಿ ನಡೆಯುವ ಯುವ ಸಂಸತ್ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.
ಈ ಬಾರಿ ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ತಾಲೂಕಿನ ಮುಳ್ಳೂರು ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯ ಬಿ.ಮಾನ್ಯ ಹಾಗೂ ಚಾಮರಾಜನಗರ ತಾಲೂಕಿನ ಆದರ್ಶ ವಿದ್ಯಾನಿಲಯದ 9ನೇತರಗತಿ ವಿದ್ಯಾರ್ಥಿನಿ ನಾಗರತ್ನ ರಾಜ್ಯ ಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವರು.