ಮೈಸೂರು: ಜೇನುಹುಳು ದಾಳಿಗೆ ಸಿಲುಕಿ ವಿದ್ಯಾರಣ್ಯಪುರಂನ ಚಾಮುಂಡಿವನದ ಚಾಮುಂಡೇಶ್ವರಿ ದೇವಸ್ಥಾನದ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದಾರೆ.
ಶಿವಣ (65)ಮೃತ ಸೆಕ್ಯೂರಿಟಿ ಗಾರ್ಡ್. ಗುರುವಾರ ಸಂಜೆ 4.30ರ ಸುಮಾರಿನಲ್ಲಿ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ಕಾಣಿಸಿಕೊಂಡ ಜೇನುಹುಳುಗಳು, ಆವರಣದಲ್ಲಿದ್ದವರ ಮೇಲೆ ದಾಳಿ ಮಾಡಿದ್ದು, ಸ್ಥಳದಲ್ಲಿದ್ದವರೆಲ್ಲೂ ಓಡಿ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಜೇನುಹುಳುಗಳ ದಾಳಿಗೆ ಸಿಲುಕಿದ ಶಿವಣ್ಣ ಮೃತಪಟ್ಟಿದ್ದಾರೆ. ಐದಾರು ಸಾರ್ವಜನಿಕರು ಗಾಯಗೊಂಡಿದ್ದಾರೆ.