ವಿಜಯಪುರ: ಸೀಲ್ಡೌನ್ನಿಂದ ಖಾಲಿ ಇರುವ ರಸ್ತೆಯಲ್ಲಿ ವ್ಯಕ್ತಿಯೋರ್ವ ಅವಾಂತರ ಸೃಷ್ಟಿಸಿದ ಘಟನೆ ನಗರದ ಸ್ಟೇಶನ್ ರಸ್ತೆಯ ಬಡೆ ಕಮಾನ್ ಬಳಿ ನಡೆದಿದೆ.
ಈತನೋರ್ವ ಮಾನಸಿಕ ಅಸ್ವಸ್ಥ ಎನ್ನಲಾಗಿದೆ. ರಸ್ತೆ ಖಾಲಿ ಇದ್ದುದರಿಂದ ವಸ್ತ್ರವನ್ನೆಲ್ಲ ಬಿಚ್ಚಿಕೊಂಡು ಓಡಾಡುತ್ತಿದ್ದ. ಆತನನ್ನು ನೋಡಿದ ಯುವಕನೋರ್ವ ತನ್ನ ಶರ್ಟ್ ಬಿಚ್ಚುಕೊಟ್ಟು ಮಾನವೀಯತೆ ಮೆರೆದಿದ್ದಾನೆ.
ಅಷ್ಟರಲ್ಲಿ ಸ್ಥಳಕ್ಕೆ ಆಗಮಿಸಿದ ಪ್ರೋಬೆಷನ್ ಪಿಎಸ್ಐ ಸೋಮನಗೌಡ ಗೌಡ್ರು ಕೂಡ ಆ ವ್ಯಕ್ತಿಗೆ ಬಟ್ಟೆ ತೊಡಿಸಲು ಸಹಾಯ ಮಾಡಿ, ಅಲ್ಲಿಂದ ಕಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)