More

    ಕಾಫಿತೋಟದಲ್ಲಿ ಕಡಿದು ಬಿದ್ದ ವಿದ್ಯುತ್ ತಂತಿ

    ಗೋಣಿಕೊಪ್: ಕಿರುಗೂರು ಗ್ರಾಮದಲ್ಲಿ ಶನಿವಾರ ರಾತ್ರಿ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಕಾಫಿಗಿಡ ಹಾಗೂ ಕಾಳುಮೆಣಸು ಬಳ್ಳಿ ಸುಟ್ಟು ಹೋಗಿವೆ.


    ಗ್ರಾಮದ ಸಣ್ಣ ಬೆಳೆಗಾರ ಕಾಕೇರ ಧನು ಎಂಬುವರಿಗೆ ಸೇರಿದ ತೋಟ ಇದಾಗಿದೆ. ಬೆಂಕಿಯಿಂದ ಸುಮಾರು 10 ಕಾಫಿಗಿಡ, 5ಕ್ಕೂ ಹೆಚ್ಚು ಕಾಳುಮೆಣಸು ಬಳ್ಳಿ ಸುಟ್ಟುಹೋಗಿವೆ. ಅದೃಷ್ಟವಶಾತ್ ಮುಂಜಾನೆ ಬಿದ್ದ ಮಳೆಯಿಂದಾಗಿ ನಷ್ಟದ ಪ್ರಮಾಣ ತಗ್ಗಿದಂತಾಗಿದೆ.


    ಸಾಮಾನ್ಯವಾಗಿ ನಿತ್ಯ ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಬೆಳೆಗಾರ ಧನು ಭಾನುವಾರ ತೋಟಕ್ಕೆ ತೆರಳಿರಲಿಲ್ಲ. ಇದರಿಂದ ಸಂಭವಿಸಬಹುದಾಗಿದ್ದ ಅಪಾಯದಿಂದ ಪಾರಾಗಿದ್ದಾರೆ. ತೋಟದಲ್ಲಿ ತಂತಿ ತುಂಡಾಗಿ ಬಿದ್ದು ವಿದ್ಯುತ್ ಹರಿಯುತ್ತಿತ್ತು. ಮಳೆ ಬಿದ್ದಿದ್ದ ಕಾರಣ ಹೆಚ್ಚು ಅನಾಹುತ ಉಂಟಾಗುತ್ತಿತ್ತು.


    ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಡಿತಗೊಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts