More

    ನಾಗಮಂಗಲ ತಾಲೂಕಿನಲ್ಲಿ ಸಂಕಲ್ಪಯಾತ್ರೆ: ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿಕೆ

    ನಾಗಮಂಗಲ: ತಾಲೂಕಿನಲ್ಲಿ ಚಲುವರಾಯಸ್ವಾಮಿ ಮತ್ತು ಸುರೇಶ್‌ಗೌಡ ಅವರನ್ನು ಸೋಲಿಸಿ, ಈ ಬಾರಿ ಅಧಿಕಾರ ಹಿಡಿಯಬೇಕೆಂಬ ದೃಷ್ಟಿಯಿಂದ ಸಂಕಲ್ಪಯಾತ್ರೆ ಹೆಸರಿನಲ್ಲಿ ತಾಲೂಕಿನಲ್ಲಿ ಪ್ರವಾಸ ಮಾಡಲಾಗುತ್ತಿದೆ ಎಂದು ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡ ಹೇಳಿದರು.
    ತಾಲೂಕಿನ ಕಾಳಿಂಗನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಂದಿಹಳ್ಳಿಯಲ್ಲಿ ಸಂಕಲ್ಪಯಾತ್ರೆಗೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, 20 ವರ್ಷಗಳಿಂದ ಅಧಿಕಾರದಲ್ಲಿದ್ದವರು ಯಾವುದೇ ಬದಲಾವಣೆ ಮಾಡದ ಕಾರಣ ಅದನ್ನು ಜನರಿಗೆ ತಿಳಿಸುವ ಕೆಲಸ ಮಾಡುತ್ತಿದ್ದೇನೆ. ಈ ಇಬ್ಬರೂ ರಾಜಕಾರಣಿಗಳ ವಿರುದ್ಧ ಜನರು ಬೇಸತ್ತು ಹೋಗಿದ್ದಾರೆ ಎಂದರು.
    ರೈತರಪರವಾಗಿ ಮಾಡಿದ ಸ್ಟಂಟ್: ತಾಲೂಕಿನ ಹಾಲ್ತಿ ಗ್ರಾಮದಲ್ಲಿ ಅರಣ್ಯಾಧಿಕಾರಿಗಳನ್ನು ಜನರ ಮುಂದೆ ಶಾಸಕ ಸುರೇಶ್‌ಗೌಡ ತರಾಟೆಗೆ ತೆಗೆದುಕೊಂಡಿರುವುದು ಒಂದು ರೀತಿಯ ಸ್ಟಂಟ್ ಅಷ್ಟೇ. 4 ವರ್ಷಗಳಿಂದ ಜಂಟಿ ಸರ್ವೇ ನಡೆಸಿ ಸಮಸ್ಯೆ ಬಗೆಹರಿಸಬಹುದಿತ್ತು. ಬದಲಾಗಿ ಜನರ ಮುಂದೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳುವ ಮೂಲಕ ರೈತರ ಮತಗಳನ್ನು ಸೆಳೆಯುವ ಸ್ಟಂಟ್ ಮಾಡಿದ್ದಾರೆ ಎಂದು ಶಾಸಕ ಸುರೇಶ್‌ಗೌಡ ವಿರುದ್ಧ ಲೇವಡಿ ಮಾಡಿದರು.
    ಇರುಬನಹಳ್ಳಿ, ಬೆಟ್ಟದಕೋಟೆ, ಬೈರಸಂದ್ರ, ಬ್ಯಾಡರಹೊಸಹಳ್ಳಿ, ಗೊಲ್ಲರಹಟ್ಟಿ, ಗರುಡನಹಳ್ಳಿ, ಬಿಳಗುಂದ, ಅಜ್ಜನಪಾಳ್ಯ ಹಾಗೂ ಗೊಂದಿಹಳ್ಳಿ ಸೇರಿದಂತೆ ಮುಂತಾದ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
    ಎಲ್.ಎಸ್.ಚೇತನ್‌ಗೌಡ, ಪಾಳ್ಯ ರಘು, ಮಂಜೇಗೌಡ ಹಾಗೂ ಸತೀಶ ಮತ್ತಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts