ಸಂಡೂರು: ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರ ಬದುಕು ದುಸ್ಥರವಾಗಿದೆ ಎಂದು ದೇವದಾಸಿ ಮಹಿಳೆಯರ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನಮ್ಮ ಹೇಳಿದರು. ಪಟ್ಟಣದ ನಿಸರ್ಗ ಭವನದಲ್ಲಿ ತಾಲೂಕಿನ ದೇವದಾಸಿ ಮಹಿಳೆಯರ ಸಂಘದ ತಾಲೂಕು ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಅದಾನಿ, ಅಂಬಾನಿಯಂತಹ ಶ್ರೀಮಂತರಿಗೆ ತೆರಿಗೆಯಲ್ಲಿ ರಿಯಾಯಿತಿ ನೀಡುವ ಬಿಜೆಪಿ ಸರ್ಕಾರ ಸಾರ್ವಜನಿಕರ ಹಣವನ್ನು ಲೂಟಿ ಹೊಡೆಯುತ್ತಿದೆ. ದೇವದಾಸಿ ಮಹಿಳೆಯರು, ಸಮಾಜದ ಕಟ್ಟಕಡೆಯ ಜನರಿಗೆ ಸರಿಯಾಗಿ ಪಿಂಚಣಿ ನೀಡುತ್ತಿಲ್ಲ ಎಂದು ದೂರಿದ ಅವರು, ಕೃಷಿ ಯೋಗ್ಯ ಭೂಮಿ, ನಿವೇಶನ ನೀಡಲು ತುರ್ತು ಕ್ರಮವಹಿಸಬೇಕು. ದೇವದಾಸಿ ಮಹಿಳೆಯರ ಮತ್ತು ಮಕ್ಕಳ ಸರ್ವೇ ಕಾರ್ಯ ತ್ವರಿತವಾಗಿ ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಅಧ್ಯಕ್ಷ ಎ.ಸ್ವಾಮಿ, ಕಾರ್ಯದರ್ಶಿ ದುರ್ಗಮ್ಮ, ಪದಾಧಿಕಾರಿಗಳಾದ ಧನುಂಜಯ ಚಿಕ್ಕ ಅಂತಾಪುರ, ಹಳ್ಳದರಾಯಪ್ಪ, ಹೊನ್ನರಮ್ಮ, ಓಬಮ್ಮ, ಮೈಲಮ್ಮ ಮತ್ತಿತರರಿದ್ದರು.