ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ಎಂದೇ ಖ್ಯಾತಿಯಾಗರುವ ನಟ ಸಲ್ಮಾನ್ ಖಾನ್ಗೂ ಕೋರ್ಟ್ ವಿಚಾರಣೆಗೂ ಬಿಡಿಸಲಾರದ ನಂಟು ಎಂದೇ ಹೇಳಬಹುದು. ವಿವಿಧ ಪ್ರಕರಣಗಳಲ್ಲಿ ವಿಚಾರಣೆ ಎದುರಿಸಿ, ಕೆಲ ಕಾಲ ಜೈಲು ಶಿಕ್ಷೆಯೂ ಅನುಭವಿಸಿರುವ ನಟ ಸಲ್ಮಾನ್ ವಿರುದ್ಧ ಮತ್ತೊಂದು ಪ್ರಕರಣ ವಿಚಾರಣಾ ಹಂತದಲ್ಲಿದೆ.
ಅದೇನೆಂದರೆ…. ಪತ್ರಕರ್ತನೊಬ್ಬನನ್ನು ಬೆದರಿಸಿ ಕಿರುಕುಳ ನೀಡಿದ್ದಾರೆ ಎಂಬ ದೂರು ಸದ್ಯ ಸಲ್ಮಾನ್ ಮೇಲಿದೆ. 2019ರಲ್ಲಿ ಈ ಘಟನೆ ನಡೆದಿತ್ತು. ಇನ್ನು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಈಗಾಗಲೇ ಕೋರ್ಟ್ ಸಮನ್ಸ್ ಜಾರಿ ಮಾಡಿತ್ತು.
ಏಪ್ರಿಲ್ 5 ರಂದು ಸಲ್ಮಾನ್ ಖಾನ್ ಹಾಜರಾಗಿರಲಿಲ್ಲ. ಇದೀಗ ಸದ್ಯ ಸಮನ್ಸ್ ಅವಧಿಯನ್ನು ವಿಸ್ತರಿಸಲಾಗಿದೆ.ಪತ್ರಕರ್ತ ಅಶೋಕ್ ಪಾಂಡೆ ಎಂಬುವವರಿಗೆ ಸಲ್ಮಾನ್ ಖಾನ್ ಹಾಗೂ ಅವರ ಬಾಡಿಗಾರ್ಡ್ ನವಾಜ್ ಶೇಖ್ ದುರ್ವರ್ತನೆ ತೋರಿದ್ದರು. ಸದ್ಯ ಜೂನ್ 13ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
2019ರಲ್ಲಿ ಸಲ್ಮಾನ್ ಖಾನ್ ಮುಂಬೈನ ರಸ್ತೆಯಲ್ಲಿ ಸೈಕಲ್ ತುಳಿಯುತ್ತಿರುವ ದೃಶ್ಯವನ್ನು ಪತ್ರಕರ್ತ ಸೆರೆ ಹಿಡಿದಿದ್ದರು. ಈ ವೇಳೆ ಸಲ್ಮಾನ್ ಹಾಗೂ ಅವರ ಬಾಡಿಗಾರ್ಡ್ ನಿಂದಿಸಿ ಹಲ್ಲೆ ನಡೆಸಿದ್ದರು.
9 ವರ್ಷಗಳ ಬಳಿಕ ಸೈನಿಕರಿಗೆ ಸಿಹಿಸುದ್ದಿ: ಕೆಲವೇ ದಿನದಲ್ಲಿ ಕೈ ಸೇರಲಿದೆ ಬುಲೆಟ್ ಪ್ರೂಫ್ ಜಾಕೆಟ್!