ಜೈಪುರ: ರಾಜಸ್ಥಾನದ ಡೆಪ್ಯೂಟಿ ಸಿಎಂ ಹಾಗೂ ಪಿಸಿಸಿ ಅಧ್ಯಕ್ಷ ಸ್ಥಾನದಿಂದ ವಜಾಗೊಂಡ ಸಚಿನ್ ಪೈಲಟ್ ಅವರ ವಿರುದ್ಧ ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ಮಾಲಿಂಗಾ ಅವರು ಕುದುರೆ ವ್ಯಾಪಾರದ ಆರೋಪ ಹೊರೆಸಿದ್ದರು.
ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯ ಪರ ವೋಟ್ ಮಾಡಿದರೆ 35 ಕೋಟಿ ರೂ.ನೀಡುವುದಾಗಿ ಆಫರ್ ನೀಡಿದ್ದರು ಎಂದು ಮಾಲಿಂಗಾ ಹೇಳಿದ್ದರು.
ಈಗ ಸಚಿನ್ ಪೈಲಟ್ ಅವರು ಕಾಂಗ್ರೆಸ್ ಶಾಸಕ ಗಿರಿರಾಜ್ ಸಿಂಗ್ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದಾರೆ. ವಕೀಲರ ಮೂಲಕ ಲೀಗಲ್ ನೋಟಿಸ್ ನೀಡಿದ್ದಾರೆ.
ಸುಳ್ಳು ಹಾಗೂ ಹುರುಳಿಲ್ಲದ ಆರೋಪ ಮಾಡಿರುವ ಎಂಎಲ್ಎ ಗಿರಿರಾಜ್ ಸಿಂಗ್ ಅವರು ಇನ್ನು ಏಳು ದಿನಗಳ ಒಳಗೆ ಲಿಖಿತ ಕ್ಷಮಾಪಣೆ ಪತ್ರದೊಂದಿಗೆ 1 ರೂ.ಪಾವತಿಸಬೇಕು. ಕ್ಷಮೆ ಕೇಳಿದ ಪತ್ರವನ್ನು ಮಾಧ್ಯಮದ ಎದುರು ಪ್ರಸ್ತುತ ಪಡಿಸಬೇಕು ಎಂದು ಸಚಿನ್ ಪೈಲಟ್ ಕಳಿಸಿದ ನೋಟಿಸ್ನಲ್ಲಿ ಸೂಚಿಸಲಾಗಿದೆ. ಇದನ್ನೂ ಓದಿ: ನಟ ದರ್ಶನ್, ಸಂಸದೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರ ವಿರುದ್ಧ ಹೈಕೋರ್ಟ್ಗೆ ದೂರು!
ಒಂದೊಮ್ಮೆ ನೋಟಿಸ್ನಲ್ಲಿ ಹೇಳಲಾಗಿದ್ದನ್ನು ಗಿರಿರಾಜ್ ಅವರು ಕಾರ್ಯರೂಪಕ್ಕೆ ತರದೆ ಇದ್ದಲ್ಲಿ, ಅವರ ವಿರುದ್ಧ ಕ್ರಿಮಿನಲ್ ಮತ್ತು ಸಿವಿಲ್ ಕೇಸ್ ದಾಖಲಿಸಲಾಗುವುದು ಎಂದು ಹೇಳಲಾಗಿದೆ.
ಗಿರಿರಾಜ್ ಸಿಂಗ್ ಮಾಲಿಂಗಾ ಅವರು ಮೊನ್ನೆ ಆರೋಪ ಮಾಡಿದ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿದ್ದ ಸಚಿನ್ ಪೈಲಟ್, ಇಂಥ ಆರೋಪಗಳನ್ನು ಇನ್ನು ಮುಂದೆ ನನ್ನ ವಿರುದ್ಧ ಪದೇಪದೆ ಮಾಡಲಾಗುತ್ತದೆ. ಆದರೆ ಇದು ಸುಳ್ಳು ಆರೋಪ. ನಾನು ಗಿರಿರಾಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದ್ದರು.(ಏಜೆನ್ಸೀಸ್)
ರಾಜ್ಯದಲ್ಲಿ ಹೊಸ ದಾಖಲೆ ಬರೆದ ಸೋಂಕಿತರ ಸಂಖ್ಯೆ; ಕೋವಿಡ್ ಸಾವು ನಿಯಂತ್ರಣ; ಹೊಸ ಪ್ರಕರಣಕ್ಕಿಲ್ಲ ಕಡಿವಾಣ