ಹೈದರಾಬಾದ್: ಕಾಂಗ್ರೆಸ್ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆಯ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ತೆಲಂಗಾಣದ ಶಾಲೆಯಲ್ಲಿ ಇದನ್ನು ಪಠ್ಯಕ್ರಮದಲ್ಲಿ ಸೇರಿಸುವಂತೆ ಕೋರಲಾಗಿದೆ.
ಈ ಕುರಿತು ತೆಲಂಗಾನ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರಿಗೆ ಕಾಂಗ್ರೆಸ್ ಪಕ್ಷದ ವಕ್ತಾರರು ಮನವಿ ಸಲ್ಲಿಸಿದ್ದು, ಪಠ್ಯವಾಗಿಸುವಂತೆ ಮನವಿ ಮಾಡಿಕೊಂಡಿದ್ದಾರೆ.
ನಿನ್ನೆ ಸೋನಿಯಾಗಾಂಧಿಯವರು 74ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಮಯದಲ್ಲಿ ಸೋನಿಯಾಗಾಂಧಿಯವರ ಅಪರೂಪದ ಜೀವನ ಚರಿತ್ರೆಯನ್ನು ಮಕ್ಕಳು ಓದುವ ಅಗತ್ಯವಿದೆ. ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ಅಮೂಲ್ಯವಾದದ್ದನ್ನು ನೀಡುವ ಉದ್ದೇಶದಿಂದ ಈ ಮನವಿ ಸಲ್ಲಿಸಲಾಗುತ್ತಿದೆ ಎಂದಿದ್ದಾರೆ ಎಐಸಿಸಿ ವಕ್ತಾರ ಶ್ರವನ್ ದಾಸೋಜು.
ಇದನ್ನೂ ಓದಿ: ಮಂಡಿ ನೋವಿಗೆ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಪರಿಹಾರ ಏನಿದೆ?
ಸೋನಿಯಾ ಗಾಂಧಿ ಈ ದೇಶಕ್ಕಾಗಿ ಮಾಡಿದ ಸೇವೆ ಹಾಗೂ ಬದ್ಧತೆಯನ್ನ ಗಮನದಲ್ಲಿಟ್ಟುಕ್ಕೊಂಡು ಸೋನಿಯಾ ಗಾಂಧಿಗೆ ಈ ಕೊಡುಗೆ ಮೂಲಕ ಗೌರವಿಸೋದು ನಮ್ಮ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದ್ದಾರೆ.
ಸೋನಿಯಾ ಬೆಂಬಲವಿಲ್ಲದೇ ತೆಲಂಗಾಣ ಉದಯವಾಗುತ್ತಿರಲಿಲ್ಲ ಎಂದು ಈ ಹಿಂದೆ ಕೆ ಚಂದ್ರಶೇಖರ್ ರಾವ್ ಅವರು ಹೇಳಿರುವ ಮಾತನ್ನೇ ಪುನಃ ನೆನಪಿಸಿರುವ ಎಐಸಿಸಿ, ಸೋನಿಯಾಗಾಂಧಿಯವರ ಪಠ್ಯವನ್ನು ಅಳವಡಿಸುವ ಮೂಲಕ ಅವರಿಗೆ ಈ ರೀತಿಯಾಗಿ ಕೊಡುಗೆ ನೀಡಬಹುದು ಎಂದು ಮನವಿ ಮಾಡಿದ್ದಾರೆ.
ತೆಲಂಗಾಣ ರಾಜ್ಯದ ಉದಯದ ಕುರಿತಂತೆ 10ನೇ ವರ್ಗದ ಪಠ್ಯಪುಸ್ತಕದಲ್ಲಿ ರಾವ್ ಅವರ ಉಪವಾಸದ ಬಗ್ಗೆ ಉಲ್ಲೇಖವಿದ್ದು, ಅದರಲ್ಲಿ ಸೋನಿಯಾಗಾಂಧಿ ಹೆಸರು ಇಲ್ಲ. ಇದು ಸರಿಯಲ್ಲ ಎಂದಿರುವ ಎಐಸಿಸಿ ಈಗ ಅವರ ಜೀವನಚರಿತ್ರೆಯನ್ನು ಮಕ್ಕಳು ಓದಲಿ ಎಂದಿದೆ.
ಒಹೋ ಹವಾಯಿ ಚಪ್ಪಲ್ಲಾ ಎಂದು ಕಾಲೆಳೆದವನಿಗೆ ಸ್ಮೃತಿ ಇರಾನಿ ಏನಂದ್ರು ಗೊತ್ತಾ?
ಬೆಲ್ಟ್ನಿಂದ ಹೊಡೀತಾರೆ, ಬೆರಳನ್ನು ಮುರಿದು ಹಿಂಸಿಸುತ್ತಾರೆ- ಮೃತ ನಟಿಯ ಮೆಸೇಜ್ ಶೇರ್ ಮಾಡಿದ ಅಣ್ಣ
ಅರ್ಚಕರು ಅರೆಬೆತ್ತಲೇಕೆ ಎಂದು ಪ್ರಶ್ನಿಸಿ ಗಲಾಟೆಗೆ ಹೊರಟ ಹೋರಾಟಗಾರ್ತಿ ಅರೆಸ್ಟ್