More

    ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?

    ಪತಿ ಸಂಸಾರ ಮಾಡಲು ಒಪ್ತಿಲ್ಲ, ನನಗೆ ಅವರು ಬೇಕು, ಮನಸ್ಸನ್ನು ಹೇಗೆ ಪರಿವರ್ತಿಸಲಿ?ಮಗಳು ಹುಟ್ಟಿದ ಮೇಲೆ ಪತಿ ಮನೆ ಕಡೆ ಬಂದಿಲ್ಲ. ಸಂಸಾರಕ್ಕೆ ಒಪ್ತಿಲ್ಲ.ಕೇಸ್‌ ಹಾಕ್ತೇನೆ ಎಂದ್ರೂ ಹಾಕ್ಕೋ ಎನ್ನುತ್ತಿದ್ದಾರೆ. ಕೇಸ್‌ ಹಾಕಿದ್ರೆ ಡಿವೋರ್ಸ್‌ಗೆ ಅರ್ಜಿ ಹಾಕ್ತೇನೆ ಎಂದು ಬೆದರಿಸುತ್ತಿದ್ದಾರೆ. ಅವರು ವಾಪಸ್‌ ಬರಲು ಏನು ಮಾಡಬೇಕು? ದಯವಿಟ್ಟು ನನಗೆ ಸರಿಯಾದ ದಾರಿ ತೋರಿಸಿ.

    ಉತ್ತರ: ದಂಪತಿಯಲ್ಲಿ ಒಬ್ಬರು ಮತ್ತೊಬ್ಬರಿಂದ ಯಾವುದೇ ಸಕಾರಣವಿಲ್ಲದೆ ದೂರ ಸರಿದರೆ ಆಗ ನೊಂದವರು ದಾಂಪತ್ಯ ಜೀವನದ ಪೂರ್ವ ಹಕ್ಕುಗಳ ಪುನರ್ ಸ್ಥಾಪನೆಗೆ / ರೆಸ್ಟಿಟ್ಯೂಷನ್ ಆಫ್ ಕಾಂಜುಗಲ್ ರೈಟ್ಸ್ ಗೆ ಹಿಂದೂ ವಿವಾಹ ಕಾಯ್ದೆಯ ಕಲಂ 9ರಂತೆ ಪ್ರಕರಣವನ್ನು ದಾಖಲಿಸಬಹುದು. ಈ ರೀತಿ ದಾವೆ ಹಾಕಿದಾಗ ಸಕಾರಣವಿಲ್ಲದೇ ನಾನು ನನ್ನ ಪತ್ನಿ ಅಥವಾ ಪತಿಯಿಂದ ದೂರ ಉಳಿದಿದ್ದೇನೆ ಎನ್ನುವುದನ್ನು ಸಾಬೀತು ಪಡಿಸುವ ಜವಾಬ್ದಾರಿ /ಹೊಣೆಗಾರಿಕೆ ಎದುರುದಾರರದ್ದೇ ಆಗಿರುತ್ತದೆ.

    ಹೀಗಾಗಿ ನೀವು ಪ್ರಕರಣ ದಾಖಲಿಸಿದಾಗ ನಿಮ್ಮ ಪತಿ ಯಾವ ಸಕಾರಣಗಳನ್ನು ಕೊಡುತ್ತಾರೆ ಎನ್ನುವುದನ್ನು ನೀವು ತಿಳಿಯ ಬಹುದು. ಪ್ರಕರಣವನ್ನು ಹಿಂದೂ ವಿವಾಹ ಕಾಯ್ದೆಯ ಕಲಂ 23(2)ರಂತೆ ಕಡ್ಡಾಯವಾಗಿ ಸಂಧಾನಕ್ಕಾಗಿ ಮಧ್ಸಸ್ಥಿಕೆಗಾರರ ಮುಂದೆ ಅಥವಾ ಸಂಧಾನಕಾರರ ಮುಂದೆ ನ್ಯಾಯಾಲಯ ಕಳಿಸುತ್ತದೆ. ಅಲ್ಲಿ ಕೂತು ಮಾತಾಡಿದಾಗ ನಿಮ್ಮ ಸಮಸ್ಯೆಗೆ ಪರಿಹಾರ ಸಿಕ್ಕಬಹುದು. ಅಲ್ಲಿ ಪರಿಹಾರ ಸಿಗದೇ ಹೋದರೆ ನೀವು ಪ್ರಕರಣ ಮುಂದುವರೆಸಬೇಕಾಗುತ್ತದೆ.

    ನೀವು ಹಾಕಿದ ಪ್ರಕರಣದಲ್ಲಿ ನಿಮ್ಮ ಪರವಾಗಿ ಆದೇಶ ಆದರೂ ನಿಮ್ಮ ಪತಿ ಬರದೇ ಹೋದರೆ , ನೀವು ದಿವಾನಿ ಪ್ರಕ್ರಿಯಾ ಸಂಹಿತೆಯ / ಸಿವಿಲ್ ಪ್ರೊಸೀಜರ್ ಕೋಡ್ ಆರ್ಡರ್ 21 ರೂಲ್ 32ರಂತೆ ಅಮಲ್ಜಾರಿಗೆ ಅರ್ಜಿ ಹಾಕಬಹುದು. ಆಗ ಆತನ ಚರ ಸ್ಥಿರ ಆಸ್ತಿಗಳನ್ನು ಅಟ್ಯಾಚ್ಮೆಂಟ್ ಮಾಡುವಂತೆಯೂ ನ್ಯಾಯಾಲಯವನ್ನು ಕೇಳಿಕೊಳ್ಳಬಹುದು. ಏನೇ ಆದರೂ ಭೌತಿಕವಾಗಿ ನಿಮ್ಮ ಪತಿ ಬಂದು ನಿಮ್ಮ ಜೊತೆ ಸಾಂಸಾರಿಕ ಜೀವನ ಮಾಡುವಂತೆ ಮಾಡಲಾಗುವುದಿಲ್ಲ. ಅದಕ್ಕೆ ನಿಮ್ಮಿಬ್ಬರ ಮನಸ್ಸುಗಳೂ ಪರಸ್ಪರ ಸ್ಪಂದಿಸಲೇಬೇಕು.

    ನಿಮಗೆ ನಿಮ್ಮ ಪತಿಯ ಆಸ್ತಿಗಳ ಮೇಲೇ ಅಟ್ಯಾಚ್ಮೆಂಟ್ ತರುವ ಆಸಕ್ತಿ ಇಲ್ಲ ಆದರೆ ಪತಿಯೇ ನಿಮ್ಮ ಜತೆಗಿರಬೇಕು ಎನ್ನುವುದಾದರೆ, ನಿಮ್ಮ ಪತಿಯ ಮನಸ್ಸು ಹೇಗೆ ಪರಿವರ್ತನೆ ಆಗಬಹುದು ಎನ್ನುವ ಬಗ್ಗೆ ಯೋಚಿಸಿ. ಪ್ರಕರಣವನ್ನು ದಾಖಲಿಸುವ ಮುಂಚೆ ನಿಮ್ಮ ತಾಲ್ಲೂಕಿನ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರಕ್ಕೆ, ನಿಮ್ಮ ಮತ್ತು ನಿಮ್ಮ ಪತಿಯ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳಾಗಿವೆ. ಅದನ್ನು ಹೋಗಲಾಡಿಸಲು ವ್ಯಾಜ್ಯ ಪೂರ್ವ ಮಧ್ಯಸ್ಥಿಕೆ ಮಾಡಬೇಕು ಎಂದು ಕೇಳಿಕೊಳ್ಳಿ. ಕೇಂದ್ರದವರು ನಿಮ್ಮಿಬ್ಬರನ್ನೂ ಕರೆಯಿಸಿ ಮಧ್ಯಸ್ಥಿಕೆಗಾರರ ಸಮ್ಮುಖ ನೀವಿಬ್ಬರೂ ಮಾತಾಡಿಕೊಂಡು ರಾಜಿ ಸೂತ್ರಕ್ಕೆ ನೀವಿಬ್ಬರೂ ಬರುವಂತೆ ಮಾಡಬಹುದು. ಅದು ಸಫಲವಾಗದೇ ಹೋದರೆ ನಂತರ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವುದು ಒಳ್ಳೆಯದು.

    ಪರಸ್ತ್ರೀ ಜತೆ ದೈಹಿಕ ಸಂಪರ್ಕ ಹೊಂದಿದರೆ ವಿವಾಹಿತನಿಗೆ ಆಕೆಯೂ ಪತ್ನಿಯಾಗುತ್ತಾಳಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts