More

    VIDEO: ಜನ್ಮದಿನದಂದು ಆಶೀರ್ವಚನ ನೀಡುತ್ತಲೇ ಲಿಂಗೈಕ್ಯರಾದ ಗೋಕಾಕ್‌ನ ಸ್ವಾಮೀಜಿ- ವಿಡಿಯೋದಲ್ಲಿ ಸೆರೆ

    ಬೆಳಗಾವಿ: ಪ್ರವಚನ ಮಾಡುತ್ತಿರುವಾಗಲೇ ತೀವ್ರ ಹೃದಯಾಘಾತಕ್ಕೊಳಗಾದ ಬೆಳಗಾವಿ ಜಿಲ್ಲೆಯ ಗೋಕಾಕ್​ ತಾಲೂಕಿನ ಬಸವಯೋಗ ಮಂಟಪ ಟ್ರಸ್ಟ್‌ನ ಬಳೋಬಾಳ್ ಮಠದ ಸಂಗನಬಸವ ಮಹಾಸ್ವಾಮೀಜಿ ಸ್ಥಳದಲ್ಲಿಯೇ ಲಿಂಗೈಕ್ಯರಾಗಿದ್ದಾರೆ.

    ಇದು ನಡೆದಿರುವುದು ನವೆಂಬರ್​ 6ರಂದು. ಘಟನೆ ತಡವಾಗಿ ಬೆಳಕಿಗೆ ಬಂದಿದೆ. ನವೆಂಬರ್‌ 6 ಅವರ ಜನ್ಮ ದಿನ. ಈ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡುತ್ತಿದ್ದರು. ನಡುವೆಯೇ ಹೃದಯಾಘಾತವಾಗಿದೆ. ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣವೇ ಕೊನೆಯುಸಿರೆಳೆದಿದ್ದಾರೆ. ಇವರಿಗೆ 53 ವರ್ಷ ವಯಸ್ಸಾಗಿತ್ತು.

    ಸ್ವಾಮೀಜಿಯವರ ಪ್ರವಚನವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯಲಾಗುತ್ತಿತ್ತು. ಇದೇ ವೇಳೆ ಘಟನೆ ನಡೆದ ಕಾರಣ, ಸ್ವಾಮೀಜಿ ಬೀಳುವ ದೃಶ್ಯ ಮೊಬೈಲ್​​​​​ನಲ್ಲಿ ಸೆರೆಯಾಗಿದೆ.

    ಆಶೀರ್ವಚನ ಮಾಡುತ್ತಲೇ ಸ್ವಾಮೀಜಿ ಲಿಂಗೈಕ್ಯರಾಗಿರುವ ವಿಡಿಯೋ ಇಲ್ಲಿದೆ:

    ಹುಚ್ಚನ ಸಾವಿಗೆ ಹೂವಿನಹಡಗಲಿಯಲ್ಲಿ ಶೋಕದ ಛಾಯೆ! ಈತ ಎಲ್ಲರಂಥಲ್ಲ… ವಿಐಪಿಗಳಂತೆ ಅಂತ್ಯಸಂಸ್ಕಾರ

    ಡ್ರಗ್ಸ್‌ ಮಾರಾಟ ದಂಧೆಗಿಳಿದ ಅಮೆಜಾನ್‌? ಸಿಹಿತುಳಸಿ ನೆಪದಲ್ಲಿ ನಾಲ್ಕು ತಿಂಗಳಲ್ಲಿ ಒಂದು ಟನ್‌ ಮಾರಾಟ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts