More

    ಬಾರ್​ನಿಂದ ನಗರಸಭೆ ಕಾಂಗ್ರೆಸ್​ ಸದಸ್ಯ ಕಿಡ್ನಾಪ್​: ಸಿಸಿಟಿವಿಯಲ್ಲಿ ಸೆರೆ

    ಕೊಪ್ಪಳ: ಕೊಪ್ಪಳ ಜಿಲ್ಲೆ ಗಂಗಾವತಿಯ ಗಂಗಾವತಿ ನಗರ ಸಭೆ ಕಾಂಗ್ರೆಸ್ ಸದಸ್ಯನನ್ನು ಅಪಹರಣ ಮಾಡಲಾಗಿರುವ ಘಟನೆ ನಡೆದಿದೆ.

    ಕಾಂಗ್ರೆಸ್ ಸದಸ್ಯ ಮನೋಹರ ಸ್ವಾಮಿ ಹಿರೇಮಠ ಅವರು ಅಪಹರಣಕ್ಕೆ ಒಳಗಾದವರು. ಗಂಗಾವತಿಯ ಬಾರ್ ಆ್ಯಂಡ್​ ರೆಸ್ಟೋರೆಂಟ್​ಗೆ ಹೋಗಿದ್ದ ಮನೋಹರ ಅವರನ್ನು ಅಲ್ಲಿಂದಲೇ ಅಪಹರಣ ಮಾಡಲಾಗಿದೆ. ಅವರನ್ನು ಕೆಲವರು ಕತ್ತು ಹಿಡಿದು ಎಳೆದುಕೊಂಡು ಹೋಗಿದ್ದಾರೆ.

    ಕೆಲವರು ಬಂದು ಬಾರ್​ನಲ್ಲಿ ಕುಳಿತಿದ್ದ ಹಿರೇಮಠ ಅವರನ್ನು ಎಳೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

    ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ನಟ ದರ್ಶನ್ ರೋಡ್ ಶೋ ಕೆಲವೇ ಕ್ಷಣಗಳಲ್ಲಿ ಆರಂಭ

    ಗಂಗಾವತಿಯಲ್ಲಿ ನಗರಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಈ ಅಪಹರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದೇ ನವೆಂಬರ್​ 2ರಂದು ಚುನಾವಣೆ ಇದೆ. ಆದ್ದರಿಂದ ಅವರನ್ನು ಬಿಜೆಪಿ ಕಾರ್ಯಕರ್ತರು ಕಿಡ್ನಾಪ್​ ಮಾಡಿದ್ದಾರೆ ಎನ್ನಲಾಗಿದೆ.

    ಬಿಜೆಪಿಯ ನಗರ ಸಭೆ ಸದಸ್ಯರು ಈ ಕೃತ್ಯ ಎಸಗಿರುವುದಾಗಿ ಕಾಂಗ್ರೆಸ್​ ಕಾರ್ಯಕರ್ತರು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಬಿಜೆಪಿಯ ನಗರಸಭೆ ಸದಸ್ಯರಾದ ಪರಶುರಾಮ ಮಡ್ಡೇರ್, ಅಜಯ್ ಬಿಚ್ಚಾಲಿ, ನವೀನ ಪಾಟೀಲ್ ಮಾಜಿ ಸದಸ್ಯ ರಾಚ್ಚಪ್ಪ ಸಿದ್ದಾಪುರ, ಮಾಜಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಸೇರಿದಂತೆ ಸಹಚರರಾದ ರವಿ ಲಿಂಗರಾಜ ಕ್ಯಾಂಪ್, ಡಬರಿ ಶರಣ ಅವರ ವಿರುದ್ಧ ದೂರು ದಾಖಲಾಗಿದೆ.

    ಈ ಎಂಟು ಜನರ ವಿರುದ್ಧ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

    ಪುಲ್ವಾಮಾ ದಾಳಿ ಮಾಡಿಸಿದ್ದು ನಾವಲ್ಲ… ಭಾರತದ ದಾಳಿಗೆ ನಾವೇನೂ ಹೆದರಿಲ್ಲ- ಉಲ್ಟಾ ಹೊಡೆದ ಪಾಕ್​

    ಇವರನ್ನು ಸೋಲಿಸುವುದಕ್ಕಾಗಿ ಅವರಿಗೆ ವೋಟ್​ ಹಾಕ್ತೇವೆ- ಮಾಯಾವತಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts