ಬುಲಂದ್ಶಹರ್ (ರಾಜಸ್ಥಾನ): ಸುರಸುಂದರನನ್ನು ಬಲೆಗೆ ಬೀಳಿಸಿ ಲಕ್ಷ ಲಕ್ಷ ರೂಪಾಯಿ ಕಿತ್ತುಕೊಂಡ ಸುಂದರಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದಾಳೆ. ಉತ್ತರ ಪ್ರದೇಶದ ಬುಲಂದ್ಶಹರ್ನ ಕಲಂದಗರ್ಹಿ ಖುರ್ಜಾ ನಿವಾಸಿ, ನೃತ್ಯಗಾತಿ ರಾಧಾ ಎಂಬಾಕೆ ‘ಮಿಸ್ಟರ್ ರಾಜಸ್ಥಾನ್’ ಅನೀಶ್ ಎಂಬುವವರ ಹನಿಟ್ರ್ಯಾಪ್ ಮಾಡಿ ಈಗ ಸಿಕ್ಕಿಬಿದ್ದಿದ್ದಾಳೆ.
ಆಕೆಯಿಂದ ₹ 19.50 ಲಕ್ಷ ಮೌಲ್ಯದ ಚೆಕ್ಗಳು ಮತ್ತು 50 ಸಾವಿರ ರೂಪಾಯಿ ನಗದು ವಶಪಡಿಸಿಕೊಳ್ಳಲಾಗಿದೆ.
ಏನಿದು ಘಟನೆ?
ಹಸನ್ಪುರದ ನಿವಾಸಿ ಮತ್ತು 2021ರಲ್ಲಿ ಬಾಡಿಬಿಲ್ಡರ್ ಚಾಂಪಿಯನ್ಶಿಪ್ ಗೆದ್ದ ನಂತರ ಮಿಸ್ಟರ್ ರಾಜಸ್ಥಾನ ಪ್ರಶಸ್ತಿ ಪಡೆದಿರುವ ಅನೀಶ್ ಹನಿಟ್ರ್ಯಾಪ್ಗೆ ಒಳಗಾದವರು. 2016ರಲ್ಲಿ ಅನೀಶ್ಗೆ ರಾಧಾಳ ಪರಿಚಯವಾಗಿತ್ತು. ಪರಿಚಯ ಸ್ನೇಹಕ್ಕೆ ತಿರುಗಿ ಇಬ್ಬರೂ ಪ್ರೀತಿಸುತ್ತಿದ್ದರು. ಇವರಿಬ್ಬರ ಸಂಬಂಧ ಒಂದು ಹಂತವನ್ನೂ ಮೀರಿ ಹೋಗಿತ್ತು.
ಇಷ್ಟೆಲ್ಲಾ ಆದ ಮೇಲೆ ರಾಧಾ, ಅನೀಶ್ನನ್ನು ಬಿಟ್ಟು ಬೇರೊಬ್ಬನ ಹಿಂದೆ ಹೋದಳು. ಕಳೆದ ಅಕ್ಟೋಬರ್ನಲ್ಲಿ ಅನೀಶ್ ಬೇರೊಂದು ಮದುವೆಯಾದರು. ಅಸ್ಸಾಂಗೆ ಹೋಗಿದ್ದ ರಾಧಾ ವಾಪಸ್ ಆದಾಗ ಆಕೆಗೆ ಅನೀಶ್ಗೆ ಮದುವೆಯಾಗಿದೆ ಎಂದು ಗೊತ್ತಾಯಿತು.
ಇದಾದ ಬಳಿಕ ಹಳೆಯ ಅಶ್ಲೀಲ ಫೋಟೋಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಆರಂಭಿಸಿದ್ದಾಳೆ. ಹೀಗೆ ಬ್ಲ್ಯಾಕ್ಮೇಲ್ ಮಾಡುತ್ತಾ ಸುಮಾರು 5 ಲಕ್ಷ ರೂ. ಪಡೆದುಕೊಂಡಿದ್ದಾಳೆ. ನಂತರ 20 ಲಕ್ಷ ರೂಪಾಯಿ ನೀಡುವಂತೆ ಒತ್ತಡ ಹೇರಿದ್ದಾಳೆ. ಹಣ ಕೊಡದಿದ್ದರೆ ಫೋಟೋಗಳನ್ನು ಲೀಕ್ ಮಾಡುವುದಾಗಿ ಹೇಳಿದ್ದಾಳೆ.
ಕೊನೆಗೆ ಬೇಸತ್ತ ಅನೀಶ್ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಇದರಿಂದ ರಾಧಾಳನ್ನು ಪೊಲೀಸರು ಬಂಧಿಸಿ ಆಕೆಯ ಬಳಿ ಇದ್ದ ಹಣವನ್ನೂ ವಶಕ್ಕೆ ಪಡೆದುಕೊಂಡಿದ್ದಾರೆ.
ಬಲವಂತವಾಗಿ ಹಿಜಾಬ್ ತೆಗೆಸಿದ ಕಂಡಕ್ಟರ್! ಹಿಡಿಶಾಪ ಹಾಕಿದ ಪ್ರಯಾಣಿಕರೂ ಸತ್ಯ ತಿಳಿದು ಶಾಕ್
ಕೈಲಾಸದಲ್ಲಿಯೂ ನಿತ್ಯಾನಂದ ಲೈಂಗಿಕ ದೌರ್ಜನ್ಯ? ವಿದೇಶಿ ಶಿಷ್ಯೆಯಿಂದ ಮೇಲ್ ಮೂಲಕ ದೂರು ದಾಖಲು!
ಹಿಂದೂಗಳಿಂದ ಮೀನು ಖರೀದಿಸಬೇಡಿ ಎಂದಾಗ ಎಲ್ಲಿ ಹೋಗಿತ್ತು ಈ ಸಾಮರಸ್ಯ? ಗರಂ ಆಗಿದೆ ಜಾಲತಾಣ