ಚಂಡೀಗಢ: ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆಯೇ ಪಕ್ಷಾಂತರ ಚಟುವಟಿಕೆ ಬಲು ಜೋರಾಗಿ ನಡೆಯುತ್ತಿದೆ. ಪಂಜಾಬ್ನಲ್ಲಿ ಕೂಡ ಇದೀಗ ಪಕ್ಷಾಂತರ ಚಟುವಟಿಕೆ ಶುರುವಾಗಿದೆ.
117 ಕ್ಷೇತ್ರಗಳಿರುವ ಪಂಜಾಬ್ನಲ್ಲಿ ಫೆಬ್ರವರಿ 14ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಾರ್ಚ್ 10ರಂದು ಮತ ಎಣಿಕೆ ನಡೆಯಲಿದೆ. ಇದರ ಬೆನ್ನಲ್ಲೇ ಕೆಲ ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರಿದ್ದಾರೆ. ಅದರಲ್ಲಿ ಪ್ರಮುಖರಾದವರು ಮುಖ್ಯಮಂತ್ರಿ ಚರಣಜಿತ್ ಸಿಂಗ್ ಛನ್ನಿಗೆ ಅವರ ಸೋದರ ಸಂಬಂಧಿ ಜಸ್ವಿಂದರ್ ಸಿಂಗ್ ದಳಿವಾಲ್! ಇದು ಚನ್ನಿ ಅವರಿಗೆ ಭಾರಿ ಆಘಾತ ಉಂಟು ಮಾಡಿದೆ.
ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಸಮ್ಮುಖದಲ್ಲಿ ದಳಿವಾಲ್ ಬಿಜೆಪಿ ಸೇರ್ಪಡೆಯಾದರು. ಇವರ ಜತೆಗೆ ಪಂಜಾಬ್ ಮಾಜಿ ಶಾಸಕ ಅರವಿಂದ್ ಖನ್ನಾ, ಶಿರೋಮಣಿ ಅಖಾಲಿ ದಳ್ದ ನಾಯಕ ಗುರ್ದೀಪ್ ಸಿಂಗ್ ಗೋಶಾ, ಅಮೃತಸರ್ದ ಮಾಜಿ ಕೌನ್ಸಿಲರ್ ಧರ್ಮವೀರ್ ಸರಿನ್ ಕೂಡ ಬಿಜೆಪಿ ಸೇರಿರುವುದು ಚೆನ್ನಿ ಅವರಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿದೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅರ್ಧದಲ್ಲಿಯೇ ಅಧಿಕಾರ ಬಿಟ್ಟ ಬಳಿಕ, ಚರಣಜಿತ್ ಸಿಂಗ್ ಚೆನ್ನಿ ಮುಖ್ಯಮಂತ್ರಿಯಾಗಿದ್ದಾರೆ. ಪಂಜಾಬ್ನಲ್ಲಿ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಈಗಾಗಲೇ ಹಲವು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದವರು. ಆದ್ದರಿಂದ ಮುಂದಿನ ಮುಖ್ಯಮಂತ್ರಿ ಯಾರನ್ನು ಮಾಡಬೇಕು ಎಂಬ ಬಗ್ಗೆ ಕಾಂಗ್ರೆಸ್ಗೆ ಇನ್ನೂ ತಲೆನೋವಾಗಿರುವ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿಯ ಹತ್ತಿರದ ಸಂಬಂಧಿಯೇ ಬಿಜೆಪಿ ಸೇರಿದ್ದು ಪಕ್ಷಕ್ಕೂ ಭಾರಿ ಆಘಾತ ಉಂಟುಮಾಡಿದೆ.
2017ರಲ್ಲಿ ಕಾಂಗ್ರೆಸ್ಗೆ ಇಲ್ಲಿ 77 ಕ್ಷೇತ್ರಗಳನ್ನು ಗೆದ್ದು, ಸ್ಪಷ್ಟ ಬಹುಮತದೊಂದಿಗೆ ಅಧಿಕಾರ ಹಿಡಿದಿತ್ತು. ಆ್ಯಪ್ 20 ಸೀಟ್, ಶಿರೋಮಣಿ ಅಖಾಲಿ ದಳ 15 ಕ್ಷೇತ್ರ, ಬಿಜೆಪಿ 3 ಕ್ಷೇತ್ರದಲ್ಲಿ ಜಯಸಾಧಿಸಿತ್ತು.
VIDEO: ‘ಬಾಳೆಹಣ್ಣು ಬೇಕೇ ಬಾಳೆಹಣ್ಣು’ ಎಂದಾಗ ಜನ ನೋಡಲಿಲ್ಲ… ಮಾರಾಟಗಾರನ ಹೊಸ ಪ್ಲ್ಯಾನ್ನಿಂದ ಭರ್ಜರಿ ವ್ಯಾಪಾರ!
VIDEO: ಈ ಜನ್ಮದಲ್ಲಿ ಈತ ಯಾರ ಮೇಲೂ ಬೈಕ್ನಿಂದ ಕೆಸರು ಹಾರಿಸಲ್ಲ… ಅಷ್ಟಕ್ಕೂ ಆಗಿದ್ದೇನು? ವೈರಲ್ ವಿಡಿಯೋ ನೋಡಿ…