ಮುಂಬೈ: ಟಿ.ವಿಯ ಟಿಆರ್ಪಿಯನ್ನು ತಿರುಚಿರುವ ಆರೋಪಕ್ಕೆ ಸಂಬಂಧಿಸಿದಂತೆ ಇದಾಗಲೇ ಭಾರಿ ಸಂಕಷ್ಟದಲ್ಲಿ ಇರುವ ರಿಪಬ್ಲಿಕ್ ಟಿವಿಯ ಮುಖ್ಯ ಸಂಪಾದಕ ಅರ್ನಬ್ ಗೋಸ್ವಾಮಿ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ.
ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತ ಹಾಗೂ ಚಿತ್ರ ನಿರ್ಮಾಪಕ ಸಂದೀಪ್ ಸಿಂಗ್ ಅರ್ನಬ್ ವಿರುದ್ಧ ಸಮರ ಸಾರಿದ್ದಾರೆ. 200 ಕೋಟಿ ರೂಪಾಯಿ ಮಾನನಷ್ಟ ನೀಡುವಂತೆ ಲೀಗಲ್ ನೋಟಿಸ್ ಜಾರಿಗೊಳಿಸಿದ್ದಾರೆ.
ಸುಶಾಂತ್ ಅವರ ಕೊಲೆಗಾರ ತಾವೇ ಎಂಬುದಾಗಿ ಬಿಂಬಿಸಿ ಟ್ವೀಟ್ಗಳನ್ನು ಮಾಡಿ, ಸುದ್ದಿ ಮಾಡಿರುವ ಅರ್ನಬ್, ತಮ್ಮಿಂದ ಹಣ ವಸೂಲಿಗೆ ಮುಂದಾಗಿದ್ದರು. ಈ ಮೂಲಕ ತಮಗೆ ಮಾನಸಿಕವಾಗಿ ಕಿರುಕುಳ ನೀಡಿದ್ದರು ಎಂದು ಸಂದೀಪ್ ಸಿಂಗ್ ದೂರಿದ್ದಾರೆ.
ಇದನ್ನೂ ಓದಿ: ಕೇರಳ ಚಿನ್ನದ ಸ್ಮಗ್ಲಿಂಗ್ ಕೇಸ್ಗೆ ದಾವೂದ್ ನಂಟು! ಕೋರ್ಟ್ಗೆ ಎನ್ಐಎ ಮಾಹಿತಿ…
ತಮ್ಮ ವಿರುದ್ಧ ದುರದ್ದೇಶಪೂರಿತ ಟ್ವೀಟ್ಗಳನ್ನು ಪ್ರಸಾರ ಮಾಡಿ, ತಮ್ಮಿಂದ ಹಣ ವಸೂಲಿ ಮಾಡುವ ಹಾಗೂ ಟಿಆರ್ಪಿ ಹೆಚ್ಚಿಸುವ ಉದ್ದೇಶದಿಂದ ತಮಗೆ ಕಳಂಕ ತರುವ ಯತ್ನವನ್ನು ರಿಪಬ್ಲಿಕ್ ಟಿವಿ ಮಾಡಿದೆ. ಅರ್ನಬ್ ಅವರ ಸಹೋದ್ಯೋಗಿಗಳು ತಮ್ಮಿಂದ ಹಣ ವಸೂಲಿ ಮಾಡಲು ಮುಂದಾಗಿದ್ದರು ಎಂದು ನೋಟಿಸ್ನಲ್ಲಿ ತಿಳಿಸಲಾಗಿದೆ.
ಈ ಕುರಿತು ನೋಟಿಸ್ ನೀಡಿರುವ ಅವರು, ತಮ್ಮ ಫೇಸ್ಬುಕ್ ಖಾತೆಯಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.
ರಿಪಬ್ಲಿಕ್ ಟಿವಿ ಉದ್ಯೋಗಿಗಳು ತಮ್ಮ ನಿವಾಸ ಪ್ರವೇಶಿಸಲು ಯತ್ನಿಸಿ ಭದ್ರತಾ ಸಿಬ್ಬಂದಿಗೆ ಹಾಗೂ ಮನೆಯ ಸಹಾಯಕರಿಗೆ ಆಗಸ್ಟ್ 22 ಹಾಗೂ 24ರ ನಡುವೆ ಕಿರುಕುಳ ನೀಡಿದ್ದರು ಎಂದು ಅವರು ಆರೋಪಿಸಿದ್ದಾರೆ.
ವಕೀಲ ರಾಜೇಶ್ ಕುಮಾರ್ ಮೂಲಕ ಸಲ್ಲಿಸಲಾದ ಈ ನೋಟಿಸ್ನಲ್ಲಿ ಅರ್ನಬ್ ಅವರು 15 ದಿನಗಳೊಳಗೆ ರೂ. 200 ಕೋಟಿ ಪರಿಹಾರ ಹಾಗೂ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲದೇ ಹೋದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು ಎಚ್ಚರಿಸಿದ್ದಾರೆ.
ಅಪ್ಪ-ಅಮ್ಮನ ಜತೆ ಜಗಳವಾಡಿ ಮನೆಬಿಟ್ಟ ಬಾಲಕಿಯ ಕೂಡಿಹಾಕಿ 22 ದಿನ ಗ್ಯಾಂಗ್ರೇಪ್!