More

    ಆರ್​ಪಿಎಫ್ ಸಿಬ್ಬಂದಿ ಬೈಕ್ ರ್ಯಾಲಿಗೆ ಚಾಲನೆ

    ಹುಬ್ಬಳ್ಳಿ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ರೈಲ್ವೆ ಸುರಕ್ಷಾ ದಳದ (ಆರ್​ಪಿಎಫ್) ಸಿಬ್ಬಂದಿ ಆಯೋಜಿಸಿರುವ ಬೈಕ್ ರ್ಯಾಲಿಗೆ ಇಲ್ಲಿನ ಗದಗ ರಸ್ತೆಯ ರೈಲ್ ಸೌಧದಲ್ಲಿ ನೈಋತ್ಯ ವಲಯದ ಮಹಾಪ್ರಬಂಧಕ ಸಂಜೀವ ಕಿಶೋರ ಅವರು ಸೋಮವಾರ ಚಾಲನೆ ನೀಡಿದರು.
    ವಲಯದ ಮೈಸೂರು, ಬೆಂಗಳೂರು ಹಾಗೂ ಹುಬ್ಬಳ್ಳಿ ವಿಭಾಗಗಳಿಂದ ತಲಾ ಐದು ಬೈಕ್​ಗಳೊಂದಿಗೆ ಒಟ್ಟು 15 ಬೈಕ್​ಗಳಲ್ಲಿ 30 ಜನ ಆರ್​ಪಿಎಫ್ ಸಿಬ್ಬಂದಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು. ಬೈಕ್ ರ‍್ಯಾಲಿ ಸಿಕಂದರಾಬಾದ್​ಗೆ ತೆರಳಿತು. ಸಿಕಂದರಾಬಾದ್​ನಲ್ಲಿ ಇನ್ನಿತರ ವಲಯಗಳ ಬೈಕ್ ಸವಾರರೊಂದಿಗೆ ರ‍್ಯಾಲಿ ಮುಂದುವರಿಯುತ್ತದೆ. ಆ. 14ಕ್ಕೆ ಈ ಬೈಕ್ ರ‍್ಯಾಲಿ ದೆಹಲಿ ತಲುಪಲಿದೆ.
    ನೈಋತ್ಯ ರೈಲ್ವ ವಲಯದ ಆರ್​ಪಿಎಫ್ ಬೈಕ್ ಸವಾರರು ವಲಯ ವ್ಯಾಪ್ತಿಯ 75 ನಿಲ್ದಾಣಗಳಲ್ಲಿ ರಾಷ್ಟ್ರ ಭಕ್ತಿಯ ಜಾಗೃತಿ ಮೂಡಿಸಿದ್ದಾರೆ.
    ಸ್ವಾತಂತ್ರ್ಯ ಹೋರಾಟಗಾರರಾದ ಧಾರವಾಡದ ನಿಂಗಯ್ಯ ಸಿಸಂಬರಿಮಠ ಹಾಗೂ ಬಸಪ್ಪ ಮಡಿವಾಳರ, ರಾಷ್ಟ್ರಪತಿ ಅವರಿಂದ ಪೊಲೀಸ್ ಪದಕ ಪಡೆದ ಆರ್​ಪಿಎಫ್​ನ ನಿವೃತ್ತ ಅಧಿಕಾರಿಗಳಾದ ಐ.ಎಚ್. ಹಂದ್ರಾಳ ಹಾಗೂ ಶಾಜಿ ಮ್ಯಾಥ್ಯೂ ಅವರನ್ನು ಸನ್ಮಾನಿಸಲಾಯಿತು. ವಲಯದ ಅಪರ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಮಿಶ್ರಾ, ಐಜಿ ಅಲೋಕ ಕುಮಾರ, ಹುಬ್ಬಳ್ಳಿ ರೈಲ್ವೆ
    ವಿಭಾಗೀಯ ವ್ಯವಸ್ಥಾಪಕ ಅರವಿಂದ ಮಾಲಖೇಡೆ ಹಾಗೂ ಇತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts