ಗೂಂಡಾಗಳು ಸಿಎಂ ಆಗಲು ಜನ ಒಪ್ಪಲ್ಲ- ಬಸನಗೌಡ ಯತ್ನಾಳ್ ವಾಗ್ದಾಳಿ

Hanumasagara Yatnal Campaign

ಹನುಮಸಾಗರ: ಡಿ.ಕೆ.ಶಿವಕುಮಾರ್ ನನ್ನ ನಾಲಿಗೆ ಟಚ್ ಮಾಡಿ ನೋಡಲಿ. ಗೂಂಡಾಗಳು ಮುಖ್ಯಮಂತ್ರಿ ಆಗುವುದನ್ನು ರಾಜ್ಯದ ಜನ ಒಪ್ಪುವುದಿಲ್ಲ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

blank

ಪಟ್ಟಣದಲ್ಲಿ ಗುರುವಾರ ರಾತ್ರಿ ಹಮ್ಮಿಕೊಂಡಿದ್ದ ಬಿಜೆಪಿ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಡಾ.ಅಂಬೇಡ್ಕರ್ ಅವರಿಗೆ ಕಾಂಗ್ರೆಸ್ ಅನ್ಯಾಯ ಮಾಡಿದೆ. ಆರ್ಟಿಕಲ್ 370 ರದ್ದು ಮಾಡಿ ಪ್ರಧಾನಿ ನರೇಂದ್ರ ಮೋದಿ, ಅಂಬೇಡ್ಕರ್ ವಿಚಾರಧಾರೆಗಳನ್ನು ಎತ್ತಿ ಹಿಡಿದಿದ್ದಾರೆ.

ರಾಮ ಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಮಂದಿರ ಜೀರ್ಣೋದ್ಧಾರ ಮಾಡಿದ್ದಾರೆ. ಕೋವಿಡ್ ಸಂಕಷ್ಟದಲ್ಲಿ ದೇಶದ ಜನರನ್ನು ಕಾಪಾಡುವ ಕೆಲಸ ಮಾಡಿದ್ದಾರೆ. 80 ಕೋಟಿ ಜನರಿಗೆ ರೇಷನ್ ನೀಡಿದ್ದಾರೆ ಎಂದ ಅವರು, ರಾಹುಲ್ ಗಾಂಧಿ ಒಬ್ಬ ದಿವಾಳಿ ಆಗುತ್ತಿರುವ ಪಕ್ಷದ ನಾಯಕ. ಏನು ಮಾತನಾಡುತ್ತಿದ್ದಾರೆ ಎಂಬುದು ಅವರಿಗೆ ಅರಿವಿಲ್ಲ. ಸಿದ್ದರಾಮಯ್ಯ ಸುಳ್ಳು ಭರವಸೆ ನೀಡುತ್ತಿದ್ದಾರೆ. ರಾಹುಲ್ ಹಾಗೂ ಸಿದ್ದರಾಮಯ್ಯ ಬಿಜೆಪಿ ಪ್ರಚಾರದ ರಾಯಭಾರಿಗಳು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ: ನಡ್ಡಾ ನಿಮಗೆ ಮಹಿಳೆಯರ ಮೇಲೆ ಗೌರವ ಇದ್ರೆ ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಿ: ಏರು ಧ್ವನಿಯಲ್ಲಿ ಡಿಕೆಶಿ ಪ್ರತಿಕ್ರಿಯೆ!

ಬಜರಂಗದಳ ಬ್ಯಾನ್ ಮಾಡಲು ಸಾಧ್ಯವಿಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಎಲ್ಲರೂ ಕೂಡಿ ಧರ್ಮ ರಕ್ಷಣೆ ಮಾಡಬೇಕು. ಜೈ ಬಜರಂಗಿ ಎಂದು ಹೇಳಿ ಮತ ಹಾಕಿ. ದೇಶದ ಉಳಿವಿಗಾಗಿ ಮೋದಿ ಯೋಜನೆ ರೂಪಿಸುತ್ತಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ದೊಡ್ಡನಗೌಡ ಎಚ್.ಪಾಟೀಲ್ ಮಾತನಾಡಿದರು. ಮಾಜಿ ಶಾಸಕ ಕೆ.ಶರಣಪ್ಪ, ಬಿಜೆಪಿ ತಾಲೂಕಾಧ್ಯಕ್ಷ ಬಸವರಾಜ ಹಳ್ಳೂರು, ಪ್ರಮುಖರಾದ ತುಕರಾಮ್ ಸುರ್ವೇ, ಮಲ್ಲಣ್ಣ ಪಲ್ಲೆದ, ವಿಠ್ಠಲ ಶ್ರೇಷ್ಠಿ ನಾಗೂರು, ನಾಗಪ್ಪ ಸೂಡಿ, ರುದ್ರಗೌಡ ಗೌಡಪ್ಪನವರ, ಪ್ರಭಾಕರ ಚಿಣಿ, ವಿಜಯ ಕುಮಾರ್ ನಾಯಕ್, ನೇಮಣ್ಣ ಮೇಲಸಕ್ರಿ, ಶಿವಪುತ್ರಪ್ಪ ಕೋಳೂರ, ಮರಿಯಪ್ಪ ಗ್ವಾತಗಿ, ಶಿವು ಮೇಲಸಕ್ರಿ, ಬಸವರಾಜ ದ್ಯಾವಣ್ಣವರ, ಬಸವರಾಜ ಹಕ್ಕಿ, ಶರಣಪ್ಪ ಹುಲ್ಲೂರು, ಯಂಕಪ್ಪ ದೇಸಾಯಿ, ಕಲ್ಯಾಣಮ್ಮ ಹಿರೇಮಠ ಇತರರಿದ್ದರು.

Share This Article

ಬೆಳಿಗ್ಗೆ ಎದ್ದಾಗ ಇವುಗಳನ್ನು ನೋಡಬೇಡಿ! ನಿಮ್ಮ ಇಡೀ ದಿನ ಚೆನ್ನಾಗಿರುತ್ತದೆ… Morning

Morning: ಬೆಳಿಗ್ಗೆ ಎದ್ದ ನಂತರ ಕೆಲವು ವಸ್ತುಗಳನ್ನು ನೋಡಿದರೆ, ಅದು ಇಡೀ ದಿನ ಅಶುಭಕರವಾಗಿರುತ್ತದೆ ಎಂದು…

ಖಾಲಿ ಹೊಟ್ಟೆಯಲ್ಲಿ ಒಂದು ಚಿಟಿಕೆ ಶುಂಠಿ ತಿಂದು, ಈ ಎಲ್ಲಾ ಸಮಸ್ಯೆಗಳಿಗೆ ಗುಡ್​​ ಬಾಯ್​​ ಹೇಳಿ | Ginger

Ginger: ಅಡುಗೆಯ ರುಚಿ ಹೆಚ್ಚಿಸಲು ನಾವು ವಿವಿಧ ರೀತಿಯ ಮಸಾಲೆ ಪದಾರ್ಥಗಳನ್ನು ಬಳಸುತ್ತೇವೆ, ಅವುಗಳಲ್ಲಿ ಶುಂಠಿಯೂ…

ಸಣ್ಣ ಇರುವವರು ದಪ್ಪವಾಗಲು ಇಲ್ಲಿದೆ ಸುಲಭ ಮಾರ್ಗ: ಇಂತಹ ನ್ಯಾಚುರಲ್​​ ಆಹಾರ ಸೇವಿಸಿದ್ರೆ ಸಾಕು| Weight Gain

Weight Gain: ಸಾಮಾನ್ಯವಾಗಿ ದಪ್ಪಗಿರುವ ವ್ಯಕ್ತಿಗಳು ಸಣ್ಣದಾಗಲು ಕಷ್ಟ ಎಂದು ಬಹುತೇಕರು ಪರಿಗಣಿಸುತ್ತಾರೆ. ಆದರೆ, ಸಣಕಲು…