ಲಾಹೋರ್: ಹಿಜ್ಬುಲ್ ಮುಜಾಹಿದ್ದೀನ್ ಉಗ್ರರ ಸಂಘಟನೆಯ ಉನ್ನತ ನಾಯಕ ರಿಯಾಜ್ ನಾಯ್ಕೂ ಹತ್ಯೆ ಪ್ರತ್ಯೇಕ ಕಾಶ್ಮೀರದ ಹೋರಾಟವನ್ನು ಇನ್ನಷ್ಟು ಪ್ರದೇಶಗಳಿಗೆ ವಿಸ್ತರಣೆ ಮಾಡಲಿದೆ ಎಂದು ಪಾಕಿಸ್ತಾನದ ಯುನೈಟೆಡ್ ಜಿಹಾದ್ ಕೌನ್ಸಿಲ್ (ಪಾಕಿಸ್ತಾನದ ಭಯೋತ್ಪಾದಕ ಗುಂಪುಗಳ ಮೈತ್ರಿಕೂಟ) ಮುಖ್ಯಸ್ಥ ಸೈಯದ್ ಸಲಾಹುದ್ದೀನ್ ಹೇಳಿದ್ದಾನೆ.
ರಿಯಾಜ್ ನಾಯ್ಕೂ ಹಾಗೂ ಆದಿಲ್ ಅಹ್ಮದ್ ಸಾವಿನ ಸಂತಾಪ ಸಭೆಯಲ್ಲಿ ಸಲಾಹುದ್ದೀನ್ ಭಾರತದ ಮೇಲೆ ಕಿಡಿಕಾರಿದ್ದಾನೆ.
ಪ್ರತ್ಯೇಕ ಕಾಶ್ಮೀರಕ್ಕಾಗಿ ನಡೆದಿರುವ ಹೋರಾಟದ ಕಿಡಿ ರಿಯಾಜ್ ನಾಯ್ಕೂ ಹತ್ಯೆ ನಂತರ ಇತರ ಪ್ರದೇಶಗಳಿಗೂ ಹರಡಿ ಬೆಂಕಿಯಾಗಿ ವ್ಯಾಪಿಸಲಿದೆ ಎಂದು ಆತ ಭಾರತಕ್ಕೆ ಎಚ್ಚರಿಕೆ ನೀಡಿದ್ದಾನೆ.
ಇದನ್ನೂ ಓದಿ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಯೋಧರ ಗುಂಡಿಗೆ ಬಲಿ
ಪುಲ್ವಾಮ ಬಳಿ ಬುಧವಾರ ನಸುಕಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಉಗ್ರರಾದ ರಿಯಾಜ್ ನಾಯ್ಕೂ ಹಾಗೂ ಆದಿಲ್ ಅಹ್ಮದ್ ಬಲಿಯಾಗಿದ್ದರು.
ರಿಯಾಜ್ನ ಈ ತ್ಯಾಗ ಕಾಶ್ಮೀರಿಗಳ ಹೋರಾಟದ ಗುರಿ ತಲುಪಲು ಸಹಾಯ ಮಾಡುತ್ತದೆ. ಪತ್ಯೇಕ ಕಾಶ್ಮೀರಕ್ಕೆ ಹೋರಾಟ ನಡೆಸಿರುವವರಿಗೆ ಈ ತ್ಯಾಗ ದೊಡ್ಡದಾಗಿ ಕಾಣುತ್ತದೆ ಎಂದು ಆತ ಸಂತಾಪ ಸಭೆಯಲ್ಲಿ ಹೇಳಿದ್ದಾನೆ.
ಸಲಾಹುದ್ದೀನ್ನನ್ನು ಅಮೆರಿಕಾ 2017ರಲ್ಲಿ ಜಾಗತಿಕ ಭಯೋತ್ಪಾದಕ ಎಂದು ಘೋಷಣೆ ಮಾಡಿದೆ.
ಪಾಕಿಸ್ತಾನ ಅಲ್ಲದೆ ಇತರ ರಾಷ್ಟ್ರಗಳಲ್ಲಿ ವಿದ್ವಂಸಕ್ಕ ಕೃತ್ಯ ಎಸಗಿದ್ದಾನೆ.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಉನ್ನತ ನಾಯಕ ರಿಯಾಜ್ ನಾಯ್ಕೂ ಹತ್ಯೆ ಭಯೋತ್ಪಾದಕರಿಗೆ ಭಾರಿ ಹಿನ್ನಡೆ ಉಂಟು ಮಾಡಿದೆ. ಪೊಲೀಸರು ಹಾಗೂ ಯೋಧರು ಸೇರಿ ನಡೆಸಿದ ಯಶಸ್ವಿ ಕಾರ್ಯಾಚರಣೆ ಎಂದು ಜಮ್ಮು ಮತ್ತು ಕಾಶ್ಮೀರದ ಹಿರಿಯ ಪೊಲೀಸ್ ಅಧಿಕಾರಿ ಅಭಿಪ್ರಾಯಪಟ್ಟಿದ್ದಾರೆ. (ಏಜೆನ್ಸೀಸ್)
ಯೋಧರ ದಾಳಿಗೆ ಬಲಿಯಾದ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಕಮಾಂಡರ್ನ ರಕ್ತಸಿಕ್ತ ಅಧ್ಯಾಯ