ನವದೆಹಲಿ: ಬಾಲಿವುಡ್ನ ಹಿರಿಯ ನಟ ರಿಷಿಕಪೂರ್ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ವಿಮಾನದಲ್ಲಿ ಪ್ರಯಾಣಿಸಲು ಅವರ ಪುತ್ರಿ ರಿದ್ಧಿಮಾ ಕಪೂರ್ ಅವರಿಗೆ ವಿಶೇಷ ಅನುಮತಿ ದೊರೆತಿದೆ.
ಎರಡು ವರ್ಷಕ್ಕೂ ಹೆಚ್ಚುಕಾಲ ಕ್ಯಾನ್ಸರ್ನೊಂದಿಗೆ ಸೆಣೆಸಿದ ಹಿರಿಯ ನಟ ಗುರುವಾರ ಬೆಳಗ್ಗೆ ನಿಧನರಾಗಿದ್ದಾರೆ. ಇವರು ತಮ್ಮ
ತಂದೆಯಾಗಿರುವ ಕಾರಣ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಾ ಕಪೂರ್ ಅವರಿಗೆ ಗುರುವಾರ ಬೆಳಗ್ಗೆ ವಿಶೇಷ ಅನುಮತಿ ದೊರೆತಿತ್ತು.
ಅದರಂತೆ ಪತಿ ಹಾಗೂ ಪುತ್ರಿಯೊಂದಿಗೆ ದೆಹಲಿಯಲ್ಲಿ ವಾಸವಾಗಿರುವ ರಿದ್ಧಿಮಾ ರಸ್ತೆ ಮೂಲಕ ಮುಂಬೈಗೆ ತೆರಳಬಹುದಿತ್ತು. ಈ ವಿಷಯವನ್ನು ಖಚಿತಪಡಿಸಿದ್ದ ದೆಹಲಿಯ ಪೊಲೀಸ್ನ ಆಗ್ನೇಯ ವಿಭಾಗದ ಡಿಸಿಪಿ ಆರ್.ಪಿ. ಮೀನಾ, ರಸ್ತೆ ಮೂಲಕ ಮುಂಬೈಗೆ ತೆರಳಲು ರಿದ್ಧಿಮಾ ಸೇರಿ ಐವರಿಗೆ ವಿಶೇಷ ಅನುಮತಿ ನೀಡಲಾಗಿದೆ. ಅಗತ್ಯವಾದ ಪಾಸ್ ಅನ್ನು ಕೂಡ ಅವರಿಗೆ ಒದಗಿಸಲಾಗಿದೆ ಎಂದು ಹೇಳಿದ್ದರು.
ಆದರೆ, ರಿಷಿ ಕಪೂರ್ ಅವರ ಅಂತ್ಯಸಂಸ್ಕಾರ ಗುರುವಾರ ಸಂಜೆಯೇ ನಿಗದಿಯಾಗಿರುವ ಕಾರಣ, ಅಷ್ಟರಲ್ಲಿ ಮುಂಬೈ ತಲುಪಲು ರಿದ್ಧಿಮಾ ಅವರಿಗೆ ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಇದೀಗ ವಿಮಾನದಲ್ಲಿ ಮುಂಬೈಗೆ ತೆರಳಲು ಅವರಿಗೆ ಅವಕಾಶ ನೀಡಲಾಗಿದೆ.
ಅಪ್ಪನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ರಿದ್ಧಿಮಗೆ ಸಿಕ್ಕಿತು ಸ್ಪೆಶಲ್ ಪರ್ಮಿಷನ್, ರಸ್ತೆ ಬದಲು ವಿಮಾನದಲ್ಲೇ ಪ್ರಯಾಣ