ಚಾಮರಾಜನಗರ: ನಗರಸಭೆಯಲ್ಲಿ ಇ-ಸ್ವತ್ತು ಮಾಡಿಕೊಡಲು ಲಂಚ ಸ್ವೀಕರಿಸುತ್ತಿದ್ದ ಕಂದಾಯ ಅಧಿಕಾರಿ ಮಂಗಳವಾರ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾನೆ.
ಇದನ್ನೂ ಓದಿ: ಇಂದಿನಿಂದ ಗೃಹಲಕ್ಷ್ಮಿ ಯೋಜನೆಗೆ ಸರ್ಜಿ ಸಲ್ಲಿಕೆ ಪ್ರಾರಂಭ!: ಯಾವೆಲ್ಲ ದಾಖಲೆಗಳು ಬೇಕು?
ಕಂದಾಯ ಅಧಿಕಾರಿ ನಾರಾಯಣ್ 20 ಸಾವಿರ ರೂ. ಲಂಚ ಪಡೆಯುವಾಗ ಸಿಕ್ಕಿಬಿದಿದ್ದಾರೆ. ಎರಡು ಸೈಟ್ಗಳನ್ನು ಏಕ ನಿವೇಶನ ಮಾಡಿಕೊಡಲು ನಾರಾಯಣ್ ಲಂಚಕ್ಕೆ ಬೇಡಿಕೆ ಇಟ್ಟಿರುವುದಾಗಿ ಲೋಕಾಯುಕ್ತ ಕಚೇರಿಗೆ ದೂರು ಬಂದಿತ್ತು.
ಇದನ್ನೂ ಓದಿ: 17ನೇ ವಯಸ್ಸಿನಲ್ಲಿ ಮಧುಮೇಹ ಪತ್ತೆ, 8 ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ಸ್ಟಾರ್ ನಟ
ಈ ಹಿನ್ನೆಲೆ ನಗರಸಭೆ ಕಚೇರಿಗೆ ಮಂಗಳವಾರ ಮಧ್ಯಾಹ್ನ ಆಗಮಿಸಿ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಪೊಲೀಸರು ದೂರುದಾರರಿಂದ ನಾರಾಯಣ್ ಲಂಚ ಸ್ವೀಕಾರ ಮಾಡುವಾಗ ಸೆರೆ ಹಿಡಿದಿದ್ದಾರೆ. ನಗರಸಭೆ ಕಚೇರಿಯಲ್ಲಿ ಇನ್ನೂ ಪರಿಶೀಲನೆ ನಡೆಯುತ್ತಿದೆ.
17ನೇ ವಯಸ್ಸಿನಲ್ಲಿ ಮಧುಮೇಹ ಪತ್ತೆ, 8 ದಿನಗಳಲ್ಲಿ 10 ಕೆಜಿ ತೂಕ ಕಳೆದುಕೊಂಡ ಸ್ಟಾರ್ ನಟ