More

    ಸಿದ್ದರಾಮಯ್ಯ ನೀಡಿದ ಕೆಟ್ಟ ಆಡಳಿತ ಬೇರೊಂದಿಲ್ಲ

    ಚಿಕ್ಕಮಗಳೂರು: ಸಿದ್ದರಾಮಯ್ಯ ಸಿಎಂ ಆಗಿ ನೀಡಿದ ಕೆಟ್ಟ ಆಡಳಿತದಂತೆ ಇನ್ನೊಂದಿಲ್ಲ. ಅದಕ್ಕಿಂತ ಕೆಟ್ಟ ಆಡಳಿತ ನೀಡಲು ಇನ್ಯಾರಿಂದಲೂ ಸಾಧ್ಯವಿಲ್ಲ. ಆ ಕಾರಣಕ್ಕಾಗಿಯೇ ಜನ ಅವರನ್ನು ಸೋಲಿಸಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಟೀಕಿಸಿದರು.

    ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಬರೀ ಸುಳ್ಳು ಹೇಳುತ್ತಾರೆ ಎಂದರು.

    ವೀರಶೈವ ಲಿಂಗಾಯತ ಸಮಾಜ ಒಡೆಯುವ ಕೆಲಸ ಮಾಡಿದ್ದು ಅವರ ಕಾಲದಲ್ಲಿ. ಜಾತಿ ಒಡೆಯುವುದೇ ಆಡಳಿತವಾ ಸಿದ್ದರಾಮಯ್ಯನವರೆ? ನಿಮ್ಮ ಅವಧಿಯಲ್ಲಿ ರುದ್ರೇಶ್, ರಾಜು, ಪ್ರಶಾಂತ್ ಪೂಜಾರಿ ಸೇರಿ 46 ಜನರ ಹತ್ಯೆಯಾಗಿದೆ. ಹೀಗಾದರಷ್ಟೇ ಆಡಳಿತವಾ? ಲೋಕಾಯುಕ್ತವನ್ನು ದುರ್ಬಲಗೊಳಿಸಿ ನಿಮ್ಮ ಮೇಲೆ ಬಂದ ಆಪಾದನೆಯನ್ನು ಎಸಿಬಿ ರಚಿಸಿ ಮುಚ್ಚುಹಾಕಿದಂತೆ ಕೆಟ್ಟ ಆಡಳಿತ ನಾವು ಮಾಡುವುದಿಲ್ಲ. ಉತ್ತಮ ಆಡಳಿತಕ್ಕೆ ನೀವು ಸಲಹೆ ಕೊಡಿ. ಆದರೆ ನಿಮ್ಮ ಕಾಲದ ಕೆಟ್ಟ ಆಡಳಿತವನ್ನೇ ಉತ್ತಮ ಆಡಳಿತ ಎಂದುಕೊಂಡರೆ ಹೇಗೆ? ಅಂತಹ ಕೆಟ್ಟ ರಾಜಕಾರಣ ನಮಗೆ ಬೇಡ ಎಂದರು.

    ಮುಸ್ಲಿಂ ಅಂದರೆ ಜಮೀರ್ ಅಹಮದ್ ಒಬ್ಬರೇನಾ?: ಮುಸಲ್ಮಾನರೆಂದರೆ ಜಮೀರ್ ಅಹಮದ್ ಒಬ್ಬರೇನಾ? ಜಾತ್ಯಾತೀತತೆ ಚಾಂಪಿಯನ್​ಶಿಪ್ ತೋರಿಸಲು ಮುಂದಿನ ಬಾರಿ ಚಿಕ್ಕಮಗಳೂರಿನಲ್ಲೂ ಮುಸಲ್ಮಾರಿಗೆ ಟಿಕೇಟ್ ನೀಡಲಿ ಬೇಡವೆಂದವರು ಯಾರು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಪ್ರಶ್ನಿಸಿದರು.

    ಬಸವಕಲ್ಯಾಣದಲ್ಲಿ ಜೆಡಿಎಸ್ ಮುಸಲ್ಮಾನ ಸಮುದಾಯಕ್ಕೆ ಟಿಕೆಟ್ ನೀಡುವ ಮೂಲಕ ಕಾಂಗ್ರೆಸ್ ಮತ ಒಡೆಯುವ ಕೆಲಸ ಮಾಡುತ್ತಿದೆ ಎಂಬ ಜಮೀರ್ ಅಹ್ಮದ್ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಹಿಂದೆ ಅವರೇನು ಮಾಡುತ್ತಿದ್ದರೊ ಅವೆಲ್ಲವನ್ನು ಈಗ ಹೇಳುತ್ತಿದ್ದಾರೆ. ಹಾಗಿದ್ದರೆ ಬಸವಕಲ್ಯಾಣದಲ್ಲಿ ಕಾಂಗ್ರೆಸ್​ನಿಂದಲೇ ಮುಸಲ್ಮಾನರಿಗೆ ಟಿಕೇಟ್ ನೀಡಬೇಕಿತ್ತು. ಅವರು ಜಾತ್ಯತೀತರ ಚಾಂಪಿಯನ್ ಅಲ್ವಾ? ಕಾಂಗ್ರೆಸ್​ನಿಂದ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಗೆಲ್ಲಿಸಲು ಸಾಧ್ಯವಿಲ್ಲವಾ? ಎಂದು ವಾಗ್ದಾಳಿ ಮಾಡಿದರು.

    ಮಾಜಿ ಸಚಿವ ಬಾಬಾಗೌಡ ಪಾಟೀಲ್ ಮನೆಗೆ ಡಿ.ಕೆ.ಶಿವಕಮಾರ್ ಭೇಟಿ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಯಾರು ಯಾರ ಮನೆಗೆ ಭೇಟಿ ನೀಡಿದರೂ ಜನ ಸಂದರ್ಭ, ಪರಿಸ್ಥಿತಿ ಅರ್ಥೈಸಿಕೊಳ್ಳುತ್ತಾರೆ. ಇವರೇನೇ ಮಾಡಿದರೂ ಜನ ಬಿಜೆಪಿಗೆ ವೋಟು ಹಾಕುತ್ತಾರೆ. ಮೂರೂ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts