More

    ಜಯದ ಹಳಿಗೆ ಸಿಎಸ್​ಕೆ, ಕೆಕೆಆರ್​ ಓಟಕ್ಕೆ ಬ್ರೇಕ್​: ಶ್ರೇಯಸ್​ ಪಡೆಗೆ ಕೈಕೊಟ್ಟ ಬ್ಯಾಟಿಂಗ್​

    ಚೆನ್ನೆ: ಎಡಗೈ ಆಲ್ರೌಂಡರ್​ ರವೀಂದ್ರ ಜಡೇಜಾ (18ಕ್ಕೆ 3) ಸ್ಪಿನ್​ ದಾಳಿ ಹಾಗೂ ನಾಯಕ ಋತುರಾಜ್​ ಗಾಯಕ್ವಾಡ್​ (67* ರನ್​, 58 ಎಸೆತ, 9 ಬೌಂಡರಿ) ಅರ್ಧಶತಕದ ನೆರವಿನಿಂದ ಹಾಲಿ ಚಾಂಪಿಯನ್​ ಚೆನ್ನೆ$ ಸೂಪರ್​ ಕಿಂಗ್ಸ್​ ತಂಡ ಐಪಿಎಲ್​&17ರಲ್ಲಿ ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 7 ವಿಕೆಟ್​ಗಳಿಂದ ಗೆಲುವು ದಾಖಲಿಸಿದೆ. ಇದರೊಂದಿಗೆ ಋತುರಾಜ್​ ಗಾಯಕ್ವಾಡ್​ ಬಳಗ ಅಂಕಪಟ್ಟಿಯಲ್ಲಿ 3ನೇ ಸ್ಥಾನಕ್ಕೆ ಮರಳಿದರೆ, ಟೂರ್ನಿಯಲ್ಲಿ ಮೊದಲ ಸೋಲುಂಡ ಶ್ರೇಯಸ್​ ಅಯ್ಯರ್​ ಪಡೆ 2ನೇ ಸ್ಥಾನ ಕಾಯ್ದುಕೊಂಡಿದೆ.

    ಚೆಪಾಕ್​ ಅಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ಇಳಿದ ಕೆಕೆಆರ್​, ದೊಡ್ಡ ಜತೆಯಾಟದ ಕೊರತೆಯ ನಡುವೆ ನಾಯಕ ಶ್ರೇಯಸ್​ ಅಯ್ಯರ್​ (34 ರನ್​, 32 ಎಸೆತ, 3 ಬೌಂಡರಿ) ಆಸರೆಯಲ್ಲಿ 9 ವಿಕೆಟ್​ಗೆ 137 ರನ್​ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಋತುರಾಜ್​ ಹಾಗೂ ಡೆರಿಲ್​ ಮಿಚೆಲ್​ (25) ನಡೆಸಿದ ಜತೆಯಾಟದ ನೆರವಿನಿಂದ ಸಿಎಸ್​ಕೆ 17.4 ಓವರ್​ಗಳಲ್ಲಿ 3 ವಿಕೆಟ್​ಗೆ 141 ರನ್​ಗಳಿಸಿ ಸುಲಭ ಗೆಲುವು ಕಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts